ಕಾರವಾರ 02 : ಜಿಲ್ಲೆಯಲ್ಲಿನ ಅಂಬೇಡ್ಕರ್ , ರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ವಸತಿ ಶಾಲೆಗಳ ಶಿಕ್ಷಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ಸತ್ಯಾಗ್ರಹ ಆರಂಭಿಸಿದರು.ವಸತಿ ಶಾಲೆಗಳ ಕೆಲ ಶಿಕ್ಷಕರು ಧರಣಿಯಲ್ಲಿ ಭಾಗವಹಿಸಿದ್ದು, ಸರ್ಕಾರ ಸ್ಪಂದಿಸದಿದ್ದರೆ ಇನ್ನೂ ಎರಡು ದಿನ ಧರಣಿ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಹೇಳಿದರು.
ಶಿಕ್ಷಕರ ಸಂಘದ ಪದಾಧಿಕಾರಿ ಶಂಕರ್ಪ ಕುರುಬರ ಮಾತನಾಡಿ ವಸತಿ ಶಾಲೆಗಳಲ್ಲಿ ಕಳೆದ 13 ವರ್ಷ ದಿಂದ ಶಿಕ್ಷಕರಾಗಿ ಕೆಲಸಮಾಡುತ್ತಿದ್ದೇವೆ. ಕಾರಣ ನಮ್ಮನ್ನು ಖಾಯಂ ಮಾಡಿ ಎಂದು ಸರ್ಕಾರವನ್ನು ಅವರು ಒತ್ತಾಯಿಸಿದರು.ಮುರಾರ್ಜಿ , ವಾಜಪೇಯಿ, ಅಂಬೇಡ್ಕರ್, ಚೆನ್ನಮ್ಮ ವಸತಿ ಶಾಲೆ ನಡೆಸುವ ಕ್ರೈಸ್ಟ ಸಂಸ್ಥೆಗೆ ಅಡಿ ನಾವು ಕೆಲಸ ಮಾಡುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನಡೆಯುತ್ತಿರುವ ರಾಜ್ಯದ ಎಲ್ಲಾ ವಸತಿ ಶಾಲೆಗಳ ಶಿಕ್ಷಕರಿಗೆ ಪ್ರತ್ಯೇಕವಸತಿ ಶಿಕ್ಷಣ ನಿರ್ದೇಶನಾಲಯ ರಚಿಸಿ ಎಂಬ ಪ್ರಮುಖ ಬೇಡಿಕೆಯನ್ನು ಅವರು ಮಂಡಿಸಿದರು.ನವೋದಯ, ಏಕಲವ್ಯ ವಸತಿ ಶಾಲೆಗಳ ಶಿಕ್ಷಕರಿಗೆ ನೀಡುವ ಸೌಲಭ್ಯಗಳನ್ನು ನಮಗೂ ನೀಡಿ, ನಮ್ಮನ್ನು ಖಾಯಂ ಮಾಡಿ ಎಂದು ಸರ್ಕಾರವನ್ನು ವಿನಂತಿಸಿದರು.
ವೇತನ ಸೌಲಭ್ಯ ನೀಡಿ. ಸರ್ಕಾರಿ ವಸತಿ ಗೃಹ ಗಳನ್ನು ನೀಡಿ ಎಂದು ವಸತಿ ಶಾಲೆಗಳ ಶಿಕ್ಷಕರ ಸಂಘದ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು. ಕಾರವಾರ ಜಿಲ್ಲೆಯಲ್ಲಿ25 ವಸತಿ ಶಾಲೆಗಳ 222 ಸಿಬ್ಬಂದಿ ಶಿಕ್ಷಕರು ಇದ್ದು, ನಮ್ಮ ಬೇಡಿಕೆ ಈಡೇರದಿದ್ದರೆ, ಮಂಗಳವಾರ, ಬುಧುವಾರವೂ ಧರಣಿ ಮುಂದುವರಿಸುತ್ತೇವೆ ಎಂದರು.ಕ್ರೈಸ್ಟ ಸಂಸ್ಥೆ ಅಡಿ ನಾವು ಕೆಲಸ ಮಾಡುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 222 ಜನ ಶಿಕ್ಷಕರು ಇದ್ದೇವೆ . ಕಳೆದ ಶನಿವಾರಮೌನ ಮೆರವಣಿಗೆ ಮಾಡಿದ್ದೇವೆ. ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾ ಗಾಂಧಿ , ಅಂಬೇಡ್ಕರ್, ವಾಜಪೇಯಿ, ಮುರಾರ್ಜಿ ವಸತಿ ಶಾಲೆಗಳ ಶಿಕ್ಷಕರಾಗಿ ದಶಕಗಳಿಂದ ಕೆಲಸ ಮಾಡುತ್ತಿದ್ದೇವೆ. ಸಮಾಜ ಕಲ್ಯಾಣ ಇಲಾಖೆಯು ಅನುದಾನ ನೀಡುತ್ತಿದೆ . ರಾಜ್ಯದಲ್ಲಿ 825 ವಸತಿ ಶಾಲೆಗಳು ಇವೆ . ಒಬಿಸಿ ಮತ್ತು ಪರಿಶಿಷ್ಟ ವರ್ಗ, ಪರಿಶಿಷ್ಟ ಜಾತಿ ಮಕ್ಕಳು ವಸತಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ನಮ್ಮ ಜಿಲ್ಲೆಯ ವಸತಿ ಶಾಲೆಗೆ ಹಾಜರಾತಿ ಪಂಚಿಂಗ್ ವ್ಯವಸ್ಥೆ ಇದೆ. ಶಾಲೆಯಲ್ಲಿ ನಾವು ಕೆಲಸ ಮಾಡುವ ಬಗ್ಗೆ ಖಾಯಂ ದಾಖಲೆ ಇಲಾಖೆಗೆ ಲಭ್ಯವಾಗುತ್ತಿದೆ ಎಂದರು.
ರಾಜ್ಯದಲ್ಲಿ3500 ಜನ ಶಿಕ್ಷಕರು ವಸತಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಕಾರವಾರ ಜಿಲ್ಲೆಯಲ್ಲಿ 222 ಜನ ಶಿಕ್ಷಕರು ಇದ್ದೇವೆ ಎಂದು ಜಿಲ್ಲಾಧ್ಯಕ್ಷರಾದ ಶಂಕರ್ಪ ಕುರುಬರ ನುಡಿದರು. ಸಹ ವಸತಿ ಶಾಲೆಯಲ್ಲಿ ಶಿಕ್ಷಕರ ಖಾಯಂ ಮಾಡುವುದು ಎಷ್ಟು ಮುಖ್ಯ ಎಂದು ಮನವರಿಕೆ ಮಾಡಿದರು. ಉತ್ತಮ ಫಲಿತಾಂಶ ಕೊಟ್ಟಿದ್ದೇವೆ ಎಂದರು. ಮೆರವಣಿಗೆಯಲ್ಲಿ ರಾಘವೇಂದ್ರ, ವಿಷ್ಣು, ಕೃಷ್ಣಮೂರ್ತಿ, ವಿಜಯ್ , ನಾಗರಾಜ್, ಹೇಮಾ ಬಂಢಾರಿ, ಅನುರಾಧ, ಸೌಖ್ಯ, ಲಕ್ಷ್ಮಿ ಶೆಟ್ಟಿ ಸೇರಿದಂತೆ ಹಲವುಶಿಕ್ಷಕರು ಉಪಸ್ಥಿತರಿದ್ದರು. ಪೊಲೀಸರು ಬಂದೋಬಸ್ತ ಏರಿ್ಡಸಿದ್ದರು.