ಪ್ರಾರ್ಥನಾ ಸಮಯದಲ್ಲಿ ಹೃದಯಾಘಾತ: ಶಿಕ್ಷಕ ಸಾವು
Teacher dies of heart attack during prayer
ಜಮಖಂಡಿ 27: ನಗರದ ತುಂಗಳ ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಭಾಷಾ ಶಿಕ್ಷಕ ಎಂದಿನಂತೆ ಶಾಲಾ ಕರ್ತವ್ಯಕ್ಕೆ ಹಾಜರಾಗಿದ್ದರು. ಬೆಳಿಗ್ಗೆಯ ಪ್ರಾರ್ಥನಾ ಸಮಯದಲ್ಲಿ ಗುರುಪಾದ ಕಾಶಿರಾಯ ಹಿಪ್ಪರಗಿ ಶಿಕ್ಷಕ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ನಾವಲಗಿ ಗ್ರಾಮದ ಗುರುಪಾದ ಕಾಶಿರಾಯ ಹಿಪ್ಪರಗಿ (48) ಎಂಬ ಕನ್ನಡ ಭಾಷಾ ಶಿಕ್ಷಕ ನಾವಲಗಿಯಲ್ಲಿ ಹಲವಾರು ವರ್ಷ ಮತ್ತು ಕಳೆದ 13 ವರ್ಷದಿಂದ ತುಂಗಳ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಹಲವಾರು ವಿದ್ಯಾರ್ಥಿಗಳಿಗೆ ದಾರೀದೀಪವಾಗಿದ್ದಾರೆ. ಇವರು ಶಾಲಾ ಸಮಯದ ಮುಂಜಾನೆ ಪ್ರಾರ್ಥನಾ ಸಮಯದಲ್ಲಿ ಏಕಾಏಕಿ ಹೃದಯಾಘಾತ ಸಂಬವಿಸಿದೆ. ಶೀಘ್ರವೇ ಚಿಕಿತ್ಸೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ 10 ಗಂಟೆಗೆ ನಿಧನರಾಗಿದ್ದರೆ.
ಗ್ರಾಮದಲ್ಲಿ ಶಿಕ್ಷಕನ ಅಗಲಿಕೆಗೆ ಜಮಖಂಡಿ ಮತ್ತು ನಾವಲಗಿ ಸುತ್ತಮುತ್ತಲಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶೋಕ ಸಾಗರದಲ್ಲಿ ಮುಳುಗಿದರು. ತುಂಗಳ ಶಾಲೆಯ ಎಲ್ಲ ವಿದ್ಯಾರ್ಥಿಗಳು ಶಿಕ್ಷಕನ ಅಗಲಿಕೆಗೆ ಕಣ್ಣಿರು ಸುರಿಸುತ್ತಿರುವುದು ದೃಶ್ಯ ಕಂಡುಬಂದಿತು.
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ 