ಪ್ರಾರ್ಥನಾ ಸಮಯದಲ್ಲಿ ಹೃದಯಾಘಾತ: ಶಿಕ್ಷಕ ಸಾವು

ಪ್ರಾರ್ಥನಾ ಸಮಯದಲ್ಲಿ ಹೃದಯಾಘಾತ: ಶಿಕ್ಷಕ ಸಾವು  Teacher dies of heart attack during prayer

ಜಮಖಂಡಿ 27: ನಗರದ ತುಂಗಳ ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಭಾಷಾ ಶಿಕ್ಷಕ ಎಂದಿನಂತೆ ಶಾಲಾ ಕರ್ತವ್ಯಕ್ಕೆ ಹಾಜರಾಗಿದ್ದರು. ಬೆಳಿಗ್ಗೆಯ ಪ್ರಾರ್ಥನಾ ಸಮಯದಲ್ಲಿ ಗುರುಪಾದ ಕಾಶಿರಾಯ ಹಿಪ್ಪರಗಿ ಶಿಕ್ಷಕ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ನಡೆದಿದೆ. 

ತಾಲೂಕಿನ ನಾವಲಗಿ ಗ್ರಾಮದ ಗುರುಪಾದ ಕಾಶಿರಾಯ ಹಿಪ್ಪರಗಿ (48) ಎಂಬ ಕನ್ನಡ ಭಾಷಾ ಶಿಕ್ಷಕ ನಾವಲಗಿಯಲ್ಲಿ ಹಲವಾರು ವರ್ಷ ಮತ್ತು ಕಳೆದ 13 ವರ್ಷದಿಂದ ತುಂಗಳ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಹಲವಾರು ವಿದ್ಯಾರ್ಥಿಗಳಿಗೆ ದಾರೀದೀಪವಾಗಿದ್ದಾರೆ. ಇವರು ಶಾಲಾ ಸಮಯದ ಮುಂಜಾನೆ ಪ್ರಾರ್ಥನಾ ಸಮಯದಲ್ಲಿ ಏಕಾಏಕಿ ಹೃದಯಾಘಾತ ಸಂಬವಿಸಿದೆ. ಶೀಘ್ರವೇ ಚಿಕಿತ್ಸೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ 10 ಗಂಟೆಗೆ ನಿಧನರಾಗಿದ್ದರೆ. 

ಗ್ರಾಮದಲ್ಲಿ ಶಿಕ್ಷಕನ ಅಗಲಿಕೆಗೆ ಜಮಖಂಡಿ ಮತ್ತು ನಾವಲಗಿ ಸುತ್ತಮುತ್ತಲಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶೋಕ ಸಾಗರದಲ್ಲಿ ಮುಳುಗಿದರು. ತುಂಗಳ ಶಾಲೆಯ ಎಲ್ಲ ವಿದ್ಯಾರ್ಥಿಗಳು ಶಿಕ್ಷಕನ ಅಗಲಿಕೆಗೆ ಕಣ್ಣಿರು ಸುರಿಸುತ್ತಿರುವುದು ದೃಶ್ಯ ಕಂಡುಬಂದಿತು.