ರಾಣೇಬೆನ್ನೂರಲ್ಲಿ ಟಾಸ್ಕ್ ಪೋಸರ್್ ಸಮಿತಿ ಸಭೆ: ರಂಜಾನ್ ಸರಳ ಆಚರಣೆಗೆ ಶಾಸಕರ ಕರೆ

ಲೋಕದರ್ಶನವರದಿ

ರಾಣೇಬೆನ್ನೂರು: ಏ.22: ಇಲ್ಲಿನ ತಾಲೂಕಾ ಪಂಚಾಯಿತಿ ಸಭಾಭವನದಲ್ಲಿ ಕರೋನಾ ವೈರಸ್ ಸೊಂಕು ತಡೆಗಟ್ಟುವ ಹಿನ್ನಲೆಯಲ್ಲಿ ಆರಂಭವಾದ ಟಾಸ್ಕ್ ಪೋಸರ್್ ಸಮಿತಿ ಸಭೆಯು ಮಂಗಳವಾರ ನಡೆಯಿತು.    ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಬಸನಗೌಡ ಕೊಟೂರ ಅವರು ಜಿಲ್ಲೆಯಲ್ಲಿ ಕರೋನಾ ವೈರಸ್ ಸೊಂಕು ಇದುವರೆಗೂ ಕಂಡಿಲ್ಲ.  ಟಾಸ್ಕ್ ಫೋಸರ್್ ಸಮಿತಿಯು ನಿರ್ಧರಿಸಿದಂತೆ ಇಂದಿನಿಂದ ನಗರವೂ ಸೇರಿದಂತೆ ತಾಲೂಕಿನಾಧ್ಯಾಂತ ಮೀನು, ಮಾಂಸ, ಸ್ಟೀಲ್, ಸಿಮೆಂಟ್ ವ್ಯಾಪಾರ ವಹಿವಾಟು ನಿಭಂದನೆಗಳೊಪಟ್ಟು ಪ್ರಾರಂಭಿಸಲು ಅನುಮತಿಸಲಾಗಿದೆ. 

ಈ ಹಿಂದೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡ ಗ್ರಾಮದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಕಾರಣದಿಂದ ಮೀನು, ಕೋಳಿ ಮಾಂಸ ಮಾರಾಟ ಮಾಡುವುದನ್ನು ನಿರ್ಭಂಧಿಸಲಾಗಿತ್ತು.  ತಾಲೂಕಾಡಳಿತದ ನಿದರ್ೇಶನದಂತೆ ಸ್ಥಳೀಯ ಮೀನು, ಮಾಂಸ ಮಾರಾಟಗಾರರು ಸ್ವಯಂ ಪ್ರೇರಣೆಯಿಂದ ಬಂದ್ಗೊಳಿಸಿ ಸಕರ್ಾರದ ಲಾಕ್ಡೌನ್ ಆದೇಶವನ್ನು ಪರಿಪಾಲಿಸಿ ಸಹಕಾರ ನೀಡಿದ್ದಾರೆ.  ಸಕರ್ಾರ ನೀಡಿರುವ ಆದೇಶದಂತೆ ಅಗತ್ಯ ಸೇವೆ ವಸ್ತುಗಳನ್ನು ಮಾರಾಟ ಮಾಡಬಹುದು.  ಆದರೆ, ಮಾಂಸ ಮಾರಾಟಗಾರರು ಮಾತ್ರ ಮುಂಜಾನೆಯಿಂದ ಮಧ್ಯಾಹ್ನ 12ಗಂಟೆಗೆ  ತನ್ನ ವ್ಯಾಪಾರವನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಿದರು. 

ಮಾಂಸ ವ್ಯಾಪಾರಿಗಳು ಸಂಪೂರ್ಣವಾಗಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.  ಈ ಸಂದರ್ಬದಲ್ಲಿ ಕೈಗಳಿಗೆ ಸ್ಯಾನಿಟರ್ ಬಳಸಬಾರದು.  ಕೇವಲ ಸೋಪನ್ನು  ಮಾತ್ರ ಬಳಸಬೇಕು. ಸಕರ್ಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪರಿಪಾಲಿಸಲೇಬೇಕು ಮತ್ತು ಗ್ರಾಹಕರಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.  ಕೇಂದ್ರ ಮತ್ತು ರಾಜ್ಯ  ಸಕರ್ಾರ ಮೇ.3ರವರೆಗೆ ಲಾಕ್ಡೌನ್ ಮುಂದುವರೆಸಿ ಕೆಲವು ವಿನಾಯಿತಿ ನೀಡಿದೆ. ಹೋಟೆಲ್ ವ್ಯಾಪಾರಸ್ಥರು ಕೇವಲ ಪಾಸರ್ೆಲ್ ಮಾತ್ರ ನೀಡಬೇಕು.  ಯಾವುದೇ ಕಾರಣಕ್ಕೂ ಹೋಟೆಲ್ನಲ್ಲಿ ಸೇವೆ ನೀಡಬಾರದು ಎಂದರು.

ಕರೋನಾ ವೈರಸ್ ಸೊಂಕಿನ ಹಾವಳಿಹಿನ್ನಲೆಯಲ್ಲಿ ವಾಣಿಜ್ಯ ನಗರದ ಜನತೆ ಸಕರ್ಾರದ ಆದೇಶವನ್ನು ಕಟ್ಟುನಿಟ್ಟಾಗಿ ಪರಿಪಾಲಿಸಿದ್ದಾರೆ.  ಈ ಸಂದರ್ಭದಲ್ಲಿ ಸಾವಿರಾರು ಪೋಲೀಸ್ ಸಿಬ್ಬಂದಿಗಳಿಗೆ ಹೊರಗಿನಿಂದ ಬಂದ ಕೆಲವು ಅಂತರ್ರಾಜ್ಯ ಕಾಮರ್ಿಕರಿಗೆ, ಬಡವರಿಗೆ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜೈನ್ ಶ್ವೇತಾಂಬರ ಸಂಘದ ಮುಖಂಡರು, ಯುವಕಾರ್ಯಕರ್ತರು, ಬಟ್ಟೆ ವ್ಯಾಪಾರಸ್ಥರು, ವರ್ತಕರು, ಸಂಘ-ಸಂಸ್ಥೆಗಳ ಮುಖಂಡರು, ನಿತ್ಯವೂ ಲಕ್ಷಾಂತರ ರೂ.ಗಳ ವೆಚ್ಚದ ದಾನವನ್ನು ನೀಡುವುದರ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.  ಸ್ವಯಂ ಸೇವಕರ ಸೇವೆ ಅತ್ಯಂತ ಪ್ರಾಮಾಣಿಕವಾಗಿದೆ ಅವರೆಲ್ಲರಿಗೂ ತಾವು ಆಡಳಿತದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಹಶೀಲ್ದಾರ ಬಸನಗೌಡ ಕೊಟೂರ ಅವರು ಹೇಳಿದರು.

ರಂಜಾನ್ ಹಬ್ಬ: ನಗರ ಮತ್ತು ತಾಲೂಕಿನಲ್ಲಿ ನಡೆಯಲಿರುವ ರಂಜಾನ್ ಹಬ್ಬದ ನಿಮಿತ್ತ ಮಂಗಳವಾರ ಮುಂಜಾನೆ ಡಿವೈಎಸ್ಪಿ ಟಿ.ವಿ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸಕರ್ಾರದ ಅಧೇಶದನ್ವಯ ಸ್ಥಳೀಯ ಟಾಸ್ಕ್ ಪೋರ್ಸ ಸಮಿತಿಯು ಇಂದು ಪೂರ್ವಭಾವಿ ಸಭೆ ನಡೆಸಲಾಗಿದ್ದು ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ.  ಎಲ್ಲ ಭಾಂಧವರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು.  ಇಫ್ತಿಯಾರ ಕೂಟವನ್ನು ಸಾರ್ವಜನಿಕವಾಗಿ ನಡೆಸುವಂತಿಲ್ಲ.   ಮನೆಯಲ್ಲಿಯೇ ಆಚರಿಸಬೇಕು. ಅಲ್ಲದೇ, ಈ ಸಂದರ್ಭದಲ್ಲಿ ಹಣ್ಣು-ಹಂಪಲು ತಿನಿಸು ಅಂಗಡಿಗಳನ್ನು ಹಾಕುವುದನ್ನು ನಿಶೇಧಿಸಲಾಗಿದೆ ಆಧೇಶವನ್ನು ಪಾಲಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅರುಣಕುಮಾರ ಪೂಜಾರ ಅವರು ಮಾತನಾಡಿ ಅನೇಕ ಹಬ್ಬ-ಹರಿದಿನಗಳನ್ನು ಹಿಂದೂ-ಮುಸ್ಲಿಂ ಭಾಂಧವರು ಅವರವರ ಧರ್ಮ ಪರಂಪರೆಯ ಸಂಪ್ರದಾಯದಂತೆ ಪ್ರತಿವರ್ಷವೂ ನಡೆಸುವುದು ಸವರ್ೇಸಾಮಾನ್ಯ.  ಆದರೆ ಈ ಬಾರಿ ಕರೋನಾ ವೈರಸ್ ಪ್ರಕರಣ ಇರುವುದರಿಂದ ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಸಕರ್ಾರಗಳು ತೆಗೆದುಕೊಂಡಿರುವ ನಿಧರ್ಾರಗಳನ್ನು ಚಾಚೂತಪ್ಪದೇ ಪರಿಪಾಲಿಸುತ್ತಾ ಸಾಗಬೇಕು ಎಂದ ಅವರು ಇಂತಹ ಸಂಕಷ್ಠ ಪರಿಸ್ಥಿತಿಯಲ್ಲಿ ಎಲ್ಲರೂ ಅತ್ಯಂತ ಸೌಹರ್ಾಧತೆಯಿಂದ ಸರಳ ರೀತಿಯಲ್ಲಿ ರಂಜಾನ್ ಹಬ್ಬವನ್ನು ಆಚರಿಸುವಂತೆ ಪೂಜಾರ ಅವರು ಮನವಿ ಮಾಡಿದರು. 

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿವರ್ಾಹಕ ಅಧಿಕಾರಿ ಡಾ|| ಎಸ್.ಎಂ.ಕಾಂಬಳೆ, ಆರೋಗ್ಯ ಅಧಿಕಾರಿ ಡಾ|| ಜಿ.ಸಂತೋಷಕುಮಾರ, ನಗರಸಭೆ ಪೌರಾಯುಕ್ತ ಡಾ|| ಎನ್.ಮಹಾಂತೇಶ್, ಡಾ|| ಗೀರಿಶ್ ಕೆಂಚಪ್ಪನವರ, ವ್ಯವಸ್ಥಾಪಕ ಬಸವರಾಜ ಶಿಡೇನೂರ, ಸಿಪಿಐಗಳಾದ ಲಿಂಗನಗೌಡ ನೆಗಳೂರ, ಸುರೇಶ್ ಸಗರಿ, ಪಿಎಸ್ಐ ಪ್ರಭು ಕೆಳಗಿನಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಟಾಸ್ಕ್ ಪೋಸರ್್ ಸಮಿತಿಯ ಸದಸ್ಯರು ನಾಗರೀಕರು ಪಾಲ್ಗೊಂಡಿದ್ದರು.