ನಾವೆಲ್ಲಾ ಮನುಷ್ಯರು ,ನಾವೆಲ್ಲಾ ಸಮಾನರು: ಸಂಧ್ಯಾ ಬಾಡಕರ್
Taluka Balabhavan Society Awareness Program
ತಾಲೂಕಾ ಬಾಲಭವನ ಸೊಸೈಟಿ ಅರಿವು ಕಾರ್ಯಕ್ರಮ
ಕಾರವಾರ 24 : ಮಕ್ಕಳು ಎಲ್ಲರ ಜೊತೆ ಬೆರೆತು , ನಾವೆಲ್ಲಾ ಒಂದೇ , ನಾವೆಲ್ಲಾ ಸಮಾನ ಮನುಷ್ಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದುನಗರಸಭೆ ಸದಸ್ಯೆ ಸಂಧ್ಯಾ ಬಾಡಕರ ಕರೆ ನೀಡಿದರು.ಅವರು ಕಾರವಾರದ ಸುಮತಿ ದಾಮ್ಲೆ ಹೈಸ್ಕೂಲ್ನಲ್ಲಿ ಇತ್ತೀಚೆಗೆ ನಡೆದ ಬಾಲಭವನ ಸೊಸೈಟಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಬಾಲಭವನ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶೋಭಾ. ಡಿ ಮುಕಟಗಾರ ಮಾತನಾಡಿ, ಇಂದಿನ ಯುಗ ಸ್ಫರ್ಧಾತ್ಮಕ ಯುಗವಾಗಿದ್ದು, ಮಕ್ಕಳು ಸ್ಫರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ. ಆಗ ಮಾತ್ರ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು .ಬಾಲ್ಯವಿವಾಹ ಹಾಗೂ ಫೋಕ್ಸೊ ಘಟನೆಗಳನ್ನು ನಡೆದ್ದಲ್ಲಿ ನಮ್ಮ ಇಲಾಖೆಯ ಗಮನಕ್ಕೆ ತನ್ನಿ . ಹಾಗೂ ಶಿಕ್ಷಕರಿಗೆ, ಪಾಲಕರಿಗೆ ಯಾವುದೇ ಮುಚ್ಚಮರೆ ಇಲ್ಲದೇ ತಿಳಿಸಬೇಕು ಎಂದರು.
ಮಕ್ಕಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ವಿದ್ಯಾಭ್ಯಾಸ ಅಷ್ಟೇ ಅಲ್ಲದೇ , ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು, ಎಲ್ಲಾ ಕ್ಷೇತ್ರದಲ್ಲೂ ಭಾಗವಹಿಸಿ ಮುಂದೆ ಬರಬೇಕು ಎಂದರು.ಕಾರ್ಯಕ್ರಮದಲ್ಲಿ ಸುಮತಿ ದಾಮ್ಲೆ ಹೈಸ್ಕೂಲ್ ಮುಖ್ಯೋಪದ್ಯಾಯ ಅರುಣಾ ರಾಣೆ, ವಿದ್ಯಾರ್ಥಿಗಳು, ಶಿಕ್ಷಕರು, ಮೇಲ್ವಿಚಾರಕಿಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 