ಕಾರವಾರ 13: ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಪರಿಶಿಷ್ಟ ಪಂಗಡದ ಜನಾಂಗದವರು ಹೆಚ್ಚಾಗಿರುವ ಜಿಲ್ಲೆಯಲ್ಲಿ ಆಯ್ಕೆಯಾದ ಗ್ರಾಮ ಪಂಚಾಯತ್ಗಳಲ್ಲಿ ಧರ್ತಿ ಅಬಾ ಅಭಿಯಾನ ಅವರ್ನೆನ್ಸ್ ಮತ್ತು ಬೆನಿಫಿಟ್ ಸ್ಯಾಚುರೇಷನ್ (ಆಚಿಡಿಣ ಂಚಿಛಚಿ ಂಛಥಿಚಿಟಿಚಿ-ಂತಿಚಿಡಿಜಟಿ ಚಿಟಿಜ ಃಜಟಿಜಜಿಣ ಖಚಿಣಣಡಿಚಿಣಠ ಅಚಿಟಠಿ) ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಪರಿಶಿಷ್ಟ ಪಂಗಡದ ಜನಾಂಗದವರು ಈ ಶಿಬಿರದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈ ಯೋಜನೆಯಡಿ ಆಯ್ಕೆಯಾದ ಹಳಿಯಾಳದ-1, ಭಟ್ಕಳದ-3, ಜೋಯಿಡಾದ-4 ಮತ್ತು ಮುಂಡಗೋಡ-23 ಸೇರಿದಂತೆ ಒಟ್ಟು 31 ಗ್ರಾಮದ 21 ಗ್ರಾಮ ಪಂಚಾಯತ್ಗಳಲ್ಲಿ ಜೂನ್ 15 ರಿಂದ ಜೂನ್ 30ರವರೆ ಋಅ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.
ಆಧಾರ ಕಾರ್ಡ, ರೇಷನ್ ಕಾರ್ಡ, ಆಯುಷ್ಮಾನ ಭಾರತ್ ಕಾರ್ಡ, ಜಾತಿ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಪಿ.ಎಂ. ಕಿಸಾನ್ ಕ್ರೆಡಿಟ್ ಕಾರ್ಡ. ವಿಮಾ ಹಕ್ಕುಗಳು, ಜನಧನ್ ಬ್ಯಾಂಕ್ ಖಾತೆ ಸಾಮಾಜಿಕ ಭದ್ರತೆಗಳಾದ ವೃದ್ದಾಪ್ಯ ಪಿಂಚಣಿ, ವಿಧವಾ ಪಿಂಚಣಿ, ದಿವ್ಯಾಂಗ ಪಿಂಚಣಿ, ಜೀವನೋಪಾಯ ಉದ್ಯೋಗ ಒಉಓಖಇಉಂ, ಪಿ.ಎಂ ವಿಶ್ವಕರ್ಮ ಮುದ್ರಾ ಸಾಲಗಳು, ಪಿ.ಎಂ ಮಾತ್ರವಂಧನ ಯೋಜನೆ. ಋಆಖ ಸೌಲಭ್ಯಗಳು ಲಸಿಕೆಕರಣ, ಖಛಿಞಟಜ ಛಿಜಟಟ ಂಟಿಟಚಿ ಕುರಿತು ಜಾಗೃತಿ ಮತ್ತು ಆರೋಗ್ಯ ತಪಾಸಣೆ ಈ ರೀತಿಯ ಎಲ್ಲಾ ಸೌಲಭ್ಯಗಳನ್ನು ಪಡೆಯುವ ಬಗ್ಗೆ , ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶಿಬಿರದಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ.