ಬಾಂಗ್ಲಾದೇಶ ಏಕದಿನ ತಂಡಕ್ಕೆ ತಮೀಮ್ ಇಕ್ಬಾಲ್ ನಾಯಕ
ಢಾಕಾ, ಮಾ 9, ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ತಮೀಮ್ ಇಕ್ಬಾಲ್ ಅವರು ವೇಗಿ ಮಶ್ರಾಫೆ ಮೊರ್ತಾಜಾ ಅವರ ಸ್ಥಾನಕ್ಕೆ ಹೆಸರಿಸಲಾಗಿದೆ.ಐದು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದ ಮಶ್ರಾಫೆ ಮೊರ್ತಾಜ ಅವರು ಕಳೆದ ವಾರ ಜಿಂಬಾಬ್ವೆ ವಿರುದ್ಧ ಮೂರನೇ ಹಾಗೂ ಕೊನೆಯ ಪಂದ್ಯದ ಬಳಿಕ ತಮ್ಮ ನಾಯಕತ್ವ ಸ್ಥಾನದಿಂದ ಕೆಳಗೆ ಇಳಿದರು."ಬಾಂಗ್ಲಾದೇಶ ಏಕದಿನ ತಂಡದ ನೂತನ ನಾಯಕನಾಗಿ ತಮೀಮ್ ಇಕ್ಬಾಲ್ಅವರನ್ನು ನೇಮಿಸಲಾಗಿದೆ,'' ಎಂದು ಬಾಂಗ್ಲಾದೇಶ ಕ್ರಿಕೆಟ್ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ಅವರು ನಿರ್ದೇಶಕರ ಸಾಮಾನ್ಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. "ತಮೀಮ್ ಇಕ್ಬಾಲ್ ಅವರಿಗೆ ಅಲ್ಪ ಅವಧಿಯ ಮಟ್ಟಿಗೆ ನಾಯಕತ್ವ ಸ್ಥಾನ ನೀಡಲಾಗಿದ್ದು, ಮುಂದಿನ ವರ್ಷ ಬೇರೆ ಆಟಗಾರನನ್ನು ಗುರುತಿಸಿ ನಾಯಕತ್ವದ ಹೊಣೆ ನೀಡಲಾಗುವುದು.ಆದರೆ, ಅಂತಿಮವಾಗಿ ನಾವು ಅಲ್ಪಾವಧಿಗೆ ತಂಡದ ನಾಯಕತ್ವವನ್ನು ತಮೀಮ್ಗೆ ನೀಡಲು ನಿರ್ಧರಿಸಿದ್ದೇವೆ. ಇವರೇ ದೀರ್ಘಾವಧಿ ನಾಯಕನಾಗಿ ಮುಂದುವರಿಯಲಿದ್ದಾರೆಂಬ ನಂಬಿಕೆ ಇದೆ,'' ಎಂದು ಹೇಳಿದರು.ಕಳೆದ ವರ್ಷ ಮಶ್ರಾಫೆ ಮೊರ್ತಾಜಾ ಅವರು ಗಾಯದಿಂದಾಗಿ ತಮೀಮ್ ಇಕ್ಬಾಲ್ ಅವರು ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಸರಣಿಯ ಎಲ್ಲ ಮೂರು ಪಂದ್ಯಗಳಲ್ಲಿ ಬಾಂಗ್ಲಾ ಸೋಲು ಅನುಭವಿಸಿತ್ತು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 