ಸ್ವಚ್ಛತಾ-ಹಿ-ಸೇವಾ ಕಾರ್ಯಕ್ರಮ

ಧಾರವಾಡ 01: ಜೆ.ಎಸ್‌.ಎಸ್ ಕೆ. ಹೆಚ್‌. ಕಬ್ಬೂರ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ ಸ್ವಚ್ಛತಾ-ಹಿ-ಸೇವಾ 2024 ಕಾರ್ಯಕ್ರಮದ ಅಂಗವಾಗಿ ಸ್ವಚ್ಛತೆಯ ಕುರಿತು ನಗರದ ದಾನೇಶ್ವರಿನಗರ ಮತ್ತು ವಿದ್ಯಾಗಿರಿಯ ಭಾಗದಲ್ಲಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಜಾಥಾದಲ್ಲಿ ಜನತಾ ಶಿಕ್ಷಣ ಸಮಿತಿಯ ಮಾನ್ಯ ಕಾರ್ಯದರ್ಶಿಗಳಾದ ಡಾ. ಅಜಿತ್ ಪ್ರಸಾದ್ ರವರು, ಐಟಿಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆಯವರು, ಕೆ.ಹೆಚ್‌. ಕಬ್ಬೂರ ಪಾಲಿಟೆಕ್ನಿಕ್‌ನ ಪ್ರಾಚಾರ್ಯೆ ವೇದಾವತಿ ಆರ್‌. ತಿವಾರಿ ಅವರು, ಪ್ರೊ. ಶಿವಾನಂದ ಶಂಬುಜಿ, ಎನ್‌.ಎಸ್‌.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಈರ​‍್ಪ ಪತ್ತಾರ್ ವಸಂತ ಐಹೊಳೆ ಹಾಗೂ ಶಿವರಾಜ ಧಾನವಾಡಕರ. ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಬೋಧಕ, ಭೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.