ಫಿಜಿಯೋಥೆರಪಿ ಚಿಕಿತ್ಸೆಯಿಂದ ಸರ್ಜರಿಯನ್ನು ತಪ್ಪಿಸಿಕೊಳ್ಳಬಹುದು , ಡಾಽಽ ಹರೀಶ್
Surgery can be avoided with physiotherapy treatment, says Dr. Harish
ಫಿಜಿಯೋಥೆರಪಿ ಚಿಕಿತ್ಸೆಯಿಂದ ಸರ್ಜರಿಯನ್ನು ತಪ್ಪಿಸಿಕೊಳ್ಳಬಹುದು , ಡಾಽಽ ಹರೀಶ್
ಬಳ್ಳಾರಿ 04 : ಸಕಾಲದಲ್ಲಿ ಫಿಜಿಯೋಥೆರಪಿ ಚಿಕಿತ್ಸೆಯನ್ನು ಪಡೆಯುವುದರಿಂದ ದೇಹಕ್ಕೆ ಮಾರಕವಾದ ಕಾಯಿಲೆಗಳಿಂದ ಮತ್ತು ಶಸ್ತ್ರ ಚಿಕಿತ್ಸೆಯಿಂದ ಪಾರಾಗಬಹುದು ಎಂದು ಡಾ. ಹರೀಶ್ ತಿಳಿಸಿದರು. ಅವರು ಇಂದು ನಗರದ ಡಾ. ರಾಜಕುಮಾರ್ ರಸ್ತೆಯ ಅನಂತ ವಾಸುದೇವ ಹಾಸ್ಪಿಟಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಸೆಪ್ಟಂಬರ್ 8 ವಿಶ್ವ ಫಿಜಿಯೋಥೆರಪಿ ದಿನ ವಾಗಿದ್ದು ಪ್ರಯುಕ್ತ ವಾಸುದೇವ ಆಸ್ಪತ್ರೆಯಲ್ಲಿ ಉಚಿತ ಫಿಜಿಯೋಥೆರಪಿ ಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ನಗರದ ಜನತೆ ಪಡೆದುಕೊಳ್ಳಬೇಕೆಂದರು. ಫಿಜಿಯೋಥೆರಪಿಸ್ಟ್ ಡಾಽಽ ಪ್ರಣತಿ ಮಾತನಾಡಿ, ಒಂದೇ ಸೂರಿನ ಅಡಿಯಲ್ಲಿ ಎಲ್ಲಾ ಚಿಕಿತ್ಸೆ ಎಂಬ ಧ್ಯೇಯ ವಾಕ್ಯದೊಂದಿಗೆ ನಮ್ಮ ಆಸ್ಪತ್ರೆಯಲ್ಲಿ, ಕ್ಯಾನ್ಸರ್, ಇಎನ್ಟಿ, ಜಾಯಿಂಟ್ ಪೇನ್ಸ್ ನರರೋಗ, ತಿರುವಿದ ಎಲುಬು, ಮಕ್ಕಳಲ್ಲಿನ ಮಾತನಾಡುವ ತೊಂದರೆ, ನಡೆದಾಡುವ ತೊಂದರೆ ಸೇರಿದಂತೆ ಎಲ್ಲಾ ರೋಗಕ್ಕೂ ಕೋಲ್ಡ್ ಲೇಸರ್ ಮೂಲಕ ಫಿಜಿಯೋಥೆರಪಿಯ ಸೂಕ್ತ ಚಿಕಿತ್ಸೆಯನ್ನು ನೀಡಿ ಶಸ್ತ್ರ ಚಿಕಿತ್ಸೆ ಇಲ್ಲದೆ ಗುಣಪಡಿಸಲಾಗುವುದು ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ಡಾಽಽ ಅಕಿಲ್ ರಾವ್ ಡಾಽಽ ಜಯಲಕ್ಷ್ಮಿ ನೇಕಾರ್ ಡಾಽಽ ರಾಕೇಶ್ ಮಾಣಿಕ್ ರಾವ್ ಡಾಽಽ ಅಖಿಲ್ ರಾವ್ ಸೇರಿದಂತೆ ಕಿರಿಯ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 