100ದಿನಗಳ ಒಳಗೆ ಮುಕ್ತಾಯಗೊಂಡ ಕಬ್ಬು ನುರಿಸುವ ಹಂಗಾಮ
Sugarcane harvesting season ends within 100 days
ಸಂಬರಗಿ 13: 2025-26ನೇ ಕಬ್ಬು ನಡೆಸುವ ಹಂಗಾಮ 100ದಿನಗಳ ಒಳಗೆ ಮುಕ್ತಾಯಗೊಂಡಿದ್ದು, ಕಬ್ಬು ಕಟಾವು ಹಾಗೂ ಸಾಗಾಣಿಕೆ ಮಾಡುವ ಕೂಲಿಗಾರರು ಮಹಾರಾಷ್ಟದ ವಿವಿಧ ಜಿಲ್ಲೆಗಳಿಗೆ ತೆರಳಿದ್ದು, ಕಾರ್ಖಾನೆಯಿಂದ ಪಡೆದುಕೊಂಡ ಮುಂಗಡ ಹಣವು ಇನ್ನೂ ಮುಟ್ಟಿಲ್ಲ. 2026-27ನೇ ಹಂಗಾಮಿನ ಕರಾರು ಮಾಡಿ ಹೋಗುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಅಥಣಿ ತಾಲೂಕು ಸಕ್ಕರೆ ನಾಡಿನ ತಾಲೂಕು ಇದ್ದು, ಕಳೆದ 30 ವರ್ಷಗಳ ಹಿಂದೆ ಕಾರ್ಖಾನೆಗಳು ನವ್ಹೇಂಬರ ತಿಂಗಳಲ್ಲಿ ಶುರುಮಾಡಿ ಮೇ ತಿಂಗಳವರೆಗೆ ನಡೆಯುತ್ತಿತ್ತು. 2001 ರಿಂದ ಅಥಣಿ ತಾಲೂಕಿನಲ್ಲಿ 7 ಕಾರ್ಖಾನೆ ಇದ್ದು, ಕಾರ್ಖಾನೆ ಪ್ರಮಾಣ ಹೆಚ್ಚಾಯಿತು. ಕಬ್ಬಿನ ಪ್ರಮಾಣ ಕಡಿಮೆ ಆಯಿತು. ಆ ಕಾರಣ ಕಬ್ಬು ನಡೆಸುವ ಹಂಗಾಮವು ಮುಕ್ತಾಯಗೊಂಡಿದೆ. 1995 ರಲ್ಲಿ ತಾಲೂಕಿನಲ್ಲಿ ಒಂದೇ ಕಾರ್ಖಾನೆ ಇದ್ದು, ಮೇ ತಿಂಗಳ ಕೊನೆಯವರೆಗೆ ಕಬ್ಬಿನ ಹಂಗಾಮ ನಡೆಯುತ್ತಿತ್ತು. ಕಾರ್ಖಾನೆ ಹೆಚ್ಚಾದ ಕಾರಣ ಕಬ್ಬು ಮುಕ್ತಾಯಗೊಂಡಿದೆ.
ಸಕ್ಕರೆ ಕಾರ್ಖಾನೆಯ ಮಾಲೀಕರು ಕಬ್ಬು ಕಟಾವು ಮಾಡುವ ವಾಹನ ಹಾಗೂ ಕೂಲಿಕಾರರು ಬೀಡ ಜಾಲನಾ, ಅಮರಾವತಿ, ಬೊರಡಾನಾ, ಸೋಲಾಪೂರ ಜಿಲ್ಲೆಯಿಂದ ಕೂಲಿಗಾರರಿಗೆ ಮುಂಗಡ ಹಣ ಕೊಟ್ಟು ಕಬ್ಬು ಕಟಾವು ಮಾಡಲು ಕರೆದುಕೊಂಡು ಬರುತ್ತಿದ್ದಾರೆ. ಹಂಗಾಮ ಮುಕ್ತಾಯಗೊಂಡ ನಂತರ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾರೆ. ರೈತರು ಕಬ್ಬಿನ ದರಕ್ಕಾಗಿ ಹೋರಾಟ ಮಾಡಿದರೂ ಸಹ 120 ದಿನಗಳ ಒಳಗೆ ಹಂಗಾಮವನ್ನು ಮುಕ್ತಾಯಗೊಳಿಸಿ ಹೋಗುತ್ತಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 