ಮಾ 12ರಂದು ಕಬ್ಬು ನುರಿಸುವ ಕಾರ್ಯ ಸ್ಥಗಿತ

 ಮಾ 12ರಂದು ಕಬ್ಬು ನುರಿಸುವ ಕಾರ್ಯ ಸ್ಥಗಿತ  Sugarcane crushing operations suspended on March 12

ಆಲಮೇಲ 09 :  ತಾಲೂಕಿನ ಸಮಿಪದ ನಾದ ಕೆಡಿ ಜಮಖಂಡಿ ಶುಗರ​‍್ಸ‌ ನಿಯಮಿತ ಘ'2 ಸಕ್ಕರೆ ಕಾರ್ಖಾನೆಯ ಪ್ರಸಕ್ತ 2025-2026ನೇ ಸಾಲಿನ ಕಬ್ಬು ನುರಿಸುವ ಕಾರ್ಯವನ್ನು ಗುರವಾರ ಮಾ.12 ರಂದು  ಬೆಳಗ್ಗೆ 10  ಘಂಟೆಗೆ  ಮುಕ್ತಾಯಗೂಳಿಸಲಾಗುವದು ಕಬ್ಬು ಬೆಳೆಗಾರರು  ಕಾರ್ಖನೆಯೊಂದಿಗೆ ಕಬ್ಬು ಪೂರೈಕೆಯ ಕರಾರಿಗೊಳಪಟ್ಟ ತಮ್ಮ ಎಲ್ಲಾ ಕಬ್ಬನ್ನು ಹಾಗೂ ಕಬ್ಬು ಕಟಾವು ಆದೇಷ ಪತ್ರಗಳನ್ವಯ  ಕಟಾವ ಮಾಡಿ  ಮಾ 12ರವರೆಗೆ ಕಾರ್ಖಾನೆಗೆ ಪೂರೈಸಿ ಸಹಕರಿಸಬೇಕು ಕಬ್ಬು ಪೂರೈಕೆಗಾಗಿ  ಕಾರ್ಖಾನೆಯಿಂದ ಪಡೆದು ಕೊಂಡ ಎಲ್ಲಾ ಕಬ್ಬು ಕಟಾವು ಆದೇಷ ಪತ್ರಗಳು ಮಾ 12ರನಂತರ  ರದ್ದುಗೊಳ್ಳುತ್ತವೆ. ಅವದಿಯ ಕಟಾವಗೊಳ್ಳದೆ ಉಳಿಯುವ ಕಬ್ಬಿಗೆ ಕಾರ್ಖಾನೆಯು ಯಾವದೆ ರೀತಿಯಿಂದ ಜವಾಬ್ಧಾರಿಯಾಗುವದಿಲ್ಲ ಪ್ರಸಕ್ತ ಹಂಗಾಮಿನಲ್ಲಿ ನಿಡಿದ ಸಹಕಾರವನ್ನು   ಮುಂಬರುವ  ಹಂಗಾಮಿನಲ್ಲೂ ನಿಡುವಂತೆ ಕಾರ್ಖಾನೆ  ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮಾಜಿ ಶಾಸಕ ಆನಂದ ನ್ಯಾಮಗೌಡ ಪ್ರಕಟನೆಯಲ್ಲಿ ರೈತ ಬಾಂಧವರಿಗೆ ಮನವಿ ಮಾಡಿಕೊಂಡಿದ್ದಾರೆ'.