ಕಬ್ಬು ಬೆಳೆ ವಿಚಾರ ಸಂಕಿರಣ, ಜವಾರಿ ದನಗಳ ಭವ್ಯ ಪ್ರದರ್ಶನ
Sugarcane crop symposium, grand exhibition of Javari cattle
ರಾಯಬಾಗ, 17 ; ಸೈನಿಕರು ದೇಶದ ಗಡಿ ರಕ್ಷಣೆ ಮಾಡಿದರೆ, ರೈತರು ದೇಶಕ್ಕೆ ಅನ್ನ ನೀಡಿ ರಾಷ್ಟ್ರವನ್ನು ಪೋಷಿಸುತ್ತಾರೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶುಕ್ರವಾರ ತಾಲೂಕಿನ ಭಿರಡಿ ಗ್ರಾಮದಲ್ಲಿ ಹುಬ್ಬಳ್ಳಿಯ ಪಾರಾದೀಪ ಫಾಸ್ಫೇಟ್, ಜುವಾರಿ ಫಾರ್ಮಹಬ್ ಮತ್ತು ವೀರಭದ್ರೇಶ್ವರ ಫರ್ಟಿಲೈಜರ್ಸ್ ಇವರ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಬ್ಬು ಬೆಳೆ ವಿಚಾರ ಸಂಕಿರಣ ಹಾಗೂ ಜವಾರಿ (ಖಿಲಾರಿ) ದನಗಳ ಭವ್ಯ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಆಧುನಿಕ ಯಂತ್ರೋಪಕರಣದಿಂದ ಸಾಂಪ್ರದಾಯಿಕ ಕೃಷಿ ಮರೆಯುವುದರಿಂದ ರೈತರ ಮನೆಗಳಲ್ಲಿ ಹಸು, ದನ ಕರುಗಳು ಮಾಯವಾಗುತ್ತಿರುವುದು ಖೇದಕರ ವಿಷಯವಾಗಿದೆ ಎಂದರು.
ರೈತರು ತಮ್ಮ ಉಪ ಕಸುಬುದಾರಿಕೆಯಾಗಿ ಹೈನುಗಾರಿಕೆ ಮಾಡಬೇಕೆಂದರು. ಕಬ್ಬು ಬೆಳೆ ವಿಷಯ ತಜ್ಞ, ಕೃಷಿ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಸಂಜೀವ ಮಾನೆ ಮಾತನಾಡಿ, ರೈತರು ಭೂಮಿಯನ್ನು ಚೆನ್ನಾಗಿ ಹದಗೊಳಿಸಿ, ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಸೂಕ್ಷ್ಮ ಪೋಷಕಾಂಶಗಳನ್ನು ಸಮತೋಲನ ಪ್ರಮಾಣದಲ್ಲಿ ಬಳಸಬೇಕು. ಸಾವಯವ ಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಬೇಕೆಂದು ಕರೆ ನೀಡಿದರು.ಬೆಂಗಳೂರು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ವಿಜ್ಞಾನಿ ಡಾ.ಪ್ರವೀಣ ರಣದೇವ, ಮಹಾದೇವ ಬೋರಗಾಂವೆ, ಶ್ರೀಧರ ಕುಡಚೆ, ಗಣೇಶ ಹೆಗಡೆ, ಸಿದ್ರಾಮ ರೆಡ್ಡಿ, ಎಚ್.ಎಮ್.ಮಹೇಶ್ವರ, ಶರಣಬಸು ಕೆಂಭಾವಿ, ಗಜರಾಜ ಭಾಂಡೇಕರ, ಮಂಜುನಾಥ ಕಳಸನ್ನವರ, ಮುರುಗೇಶ ನಿಶಾನದಾರ, ಭಯ್ಯಾ ಸರಕಾರ, ಶಂಕರ ಗಡಕರಿ, ಭೀಮಪ್ಪ ನಿಡವಣಿ, ಕೆಂಪಣ್ಣ ಮೈಶಾಳೆ ಹಾಗೂ ರೈತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 