ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ

ವಿದ್ಯಾರ್ಥಿಗಳು  ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ Students participate in extracurricular activities

                    ಹೂವಿನಹಡಗಲಿ  21:  ವಿದ್ಯಾರ್ಥಿಗಳು ಓದಿನ ಜೊತೆಗೆ ಕಲೆ,ಸಾಹಿತ್ಯ, ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತೆ  ಜಿಬಿಆರ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ ರೆಡ್ಡಿ ಕಿವಿ ಮಾತು ಹೇಳಿದರು.ಪಟ್ಟಣದ ಜಿಬಿಆರ್ ಕಾಲೇಜಿನ ವಾಣಿಜ್ಯ ಶಸ್ತ್ರ ವಿಭಾಗದಿಂದ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಬಿಆರ್ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾಲೇಜಿನಲ್ಲಿ ವಿದ್ಯಾರ್ಥಿಗಳು ಯಾವುದೇ ರಾಸಾಯನಿಕಗಳನ್ನು ಬಳಸದೆ ಸಿದ್ದ ಪಡಿಸಿದ ಉತ್ಪನ್ನಗಳು ಮುಂಬರುವ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಸಿಗುತ್ತದೆ.    

                    ವಿದ್ಯಾರ್ಥಿಗಳು ಪುಸ್ತಕದ ಲ್ಲಿನ ಅಭ್ಯಾಸದಿಂದ ಜ್ಞಾನವನ್ನು ಮಾತ್ರ ಪಡೆಯುತ್ತಾರೆ ಆದರೆ ವ್ಯಾವಹಾರಿಕ ಜ್ಞಾನವನ್ನು ಸಿಗಲ್ಲ ಜತೆಗೆ ಮಾರುಕಟ್ಟೆ, ವಹಿವಾಟು ಮಾಡಿದಾಗ ಹೆಚ್ಚಿನ ಜ್ಞಾನ ಪಡೆಯಬಹುದು ಎಂದರು.ಆಡಳಿತ ಮಂಡಳಿ ಸದಸ್ಯ ಪಿ.ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಸ್ವಂತ ಉದ್ಯೋಗ ವನ್ನು  ಸೃಷ್ಠಿಸಿ ಇನ್ನಷ್ಟು ಜನತೆಗೆ ಉದ್ಯೋಗ ನೀಡುವಂತವರಾಗಬೇಕು ಎಂದರು.ಪ್ರಾಚಾರ್ಯ ಎಸ್‌.ಎಸ್‌.ಪಾಟೀಲ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಪ್ರತಿನಿತ್ಯ ತರಗತಿ ಸಮಯದ ನಂತರ  ತಮ್ಮದೆ ಸ್ವಂತ ಉತ್ಪನ್ನಗಳನ್ನು ತಯಾರು ಮಾಡುವ ಸಿದ್ದತೆ ನಡೆಸಿದ್ದಾರೆ ಜತೆಗೆ ಕಲಿಕೆಗೆ ಪ್ರೋತ್ಸಾಹ ಅಗತ್ಯ ಎಂದರು.   

                    ಎಂ.ಮಲ್ಲಿಕಾರ್ಜುನ, ಕೆ.ಎಂ.ಉದಾಸಿ, ಸೊಪ್ಪಿನ ಪ್ರಕಾಶ್, ಟಿ.ಪ್ರಕಾಶ್, ಪ.ಪೂ. ಕಾಲೇಜಿನ ಪ್ರಾಚಾರ್ಯ ಅಮರೇಗೌಡ ಎನ್ ಪಾಟೀಲ, ದೈಹಿಕನಿರ್ದೇಶಕ ಬಡೇಸಾಬ್ ನಾಯಕ, ವಾಣಿಜ್ಯಶಾಸ್ತೊ ವಿಭಾಗದ ಮುಖ್ಯಸ್ಥ ಶೇಕ್ಷಾವಲಿ, ಐಕ್ಯೂಎಸಿ ಸಂಯೋಜಕಿ ಡಾ.ಮಹಿಮಾಜ್ಯೋತಿ, ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ, ಶಶಿಧರ್ ಸ್ವಾಮಿ ಹಿರೇಮಠ, ಆಸ್ಮಾ ಹಾಗೂ ಇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿದ್ದರು.