ವೈದ್ಯಕೀಯ ಕಾಲೇಜು ಪ್ರಾರಮಭಿಸಲು ಹೋರಾಟ
Struggle to start a medical college
ವೈದ್ಯಕೀಯ ಕಾಲೇಜು ಪ್ರಾರಮಭಿಸಲು ಹೋರಾಟ
ವಿಜಯಪುರ 11: ಜಿಲ್ಲೆಯ ಜನತೆಗೆ ವೈದ್ಯಕೀಯ ಕಾಲೇಜು ಅತ್ಯಂತ ಅಗತ್ಯ. ಈ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ ಸರ್ಕಾರಿ ಮಾದರಿಯಲ್ಲಿ ಬರಬೇಕೋ,ಅಥವಾ ಕಕಕ ಮಾದರಿಯಲ್ಲಿ ಬರಬೇಕೋ ಎಂಬ ಅಭಿಪ್ರಾಯ ಬೇರೆಬೇರೆ. ಆದರೆ ನಮ್ಮ ನಿಲುವು ಒಂದೇ ಯಾವುದೇ ಮಾದರಿಯಾದರೂ ಪರವಾಗಿಲ್ಲ, ಜಿಲ್ಲೆಗೆ ಬೇಕಾದ ವೈದ್ಯಕೀಯ ಕಾಲೇಜು ಬೇಗ ಪ್ರಾರಂಭವಾಗಬೇಕು.ಸರ್ಕಾರಿ ಕಾಲೇಜಿಗೆ ಒಂದು ರೀತಿಯ ಲಾಭಗಳಿವೆ, ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ, ಸೇವಾ ಧೋರಣೆ. ಕಕಕ ಮಾದರಿಗೆ ಬೇರೆ ಲಾಭಗಳಿವೆ, ವೇಗವಾಗಿ ಕಟ್ಟುವ ಸಾಮರ್ಥ್ಯ, ಉತ್ತಮ ಸೌಲಭ್ಯಗಳು, ಉತ್ತಮ ತಂತ್ರಜ್ಞಾನ. ಆದರೆ ಇಂದು ಜನರಿಗೆ ಮುಖ್ಯವಾಗಿರುವುದು ಮಾದರಿ ಅಲ್ಲ ಕಾಲೇಜು ಆರಂಭವಾಗೋದು ಯಾವಾಗ ಎಂಬುದು.“ವೈದ್ಯಕೀಯ ಕಾಲೇಜು ವಿಷಯದಲ್ಲಿ ಈಗಾಗಲೇ ಬಹಳಷ್ಟು ವರ್ಷಗಳ ಕಾಲ ನಡೆದಿರುವ ಚರ್ಚೆಗಳನ್ನು ಹಾಗೂ ಪ್ರಕ್ರಿಯೆಯ ವಿಳಂಬವನ್ನು ಜಿಲ್ಲೆಯ ಜನರು ನೋಡಿದ್ದಾರೆ. ಈಗ ಇದು ಇನ್ನೂ ಮುಂದೂಡಲಾದಂತಹ ವಿಷಯವಲ್ಲ. ಇನ್ನೂ ಕಾಲಹರಣ ಮಾಡದೇ ತಕ್ಷಣ ನಿರ್ಧಾರ ಕೈಗೊಂಡು ಕಾಲೇಜು ಪ್ರಾರಂಭಿಸುವುದು ಅತ್ಯಂತ ಅಗತ್ಯ,”ವಿಜಯಪುರದ ಜನ ಇಂದು ಕಡೆ ಚಿಕಿತ್ಸೆಗಾಗಿ ಹೋಗುತ್ತಿದ್ದಾರೆ. ಇದು ಸಮಯ, ಹಣ ಮತ್ತು ಜೀವಕ್ಕೆ ಹೊರೆ.ಈ ಜಿಲ್ಲೆಯ ಯುವಕರು ವೈದ್ಯಕೀಯ ಶಿಕ್ಷಣಕ್ಕಾಗಿ ಇನ್ನೂ ಹೊರ ಜಿಲ್ಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.ಆದ್ದರಿಂದ, ಸರ್ಕಾರ, ವಿಪಕ್ಷ, ತಜ್ಞರು ಮತ್ತು ಜಿಲ್ಲಾಡಳಿತ ಎಲ್ಲರು ಒಟ್ಟಾಗಿ ಜಿಲ್ಲೆಗೆ ಯಾವ ಮಾದರಿ ಸೂಕ್ತ ಎಂಬುದನ್ನು ಬೇಗ ಅಂತಿಮಗೊಳಿಸಬೇಕು. ರಾಜಕೀಯ ಚರ್ಚೆಗಳು ನಂತರಕ್ಕೂ ನಡೆಯಲಿ, ಆದರೆ ವೈದ್ಯಕೀಯ ಕಾಲೇಜು ಮೊದಲ ಆದ್ಯತೆ ಆಗಲಿ.ಜಿಲ್ಲೆಯ ಆರೋಗ್ಯ, ಶಿಕ್ಷಣ ಮತ್ತು ಅಭಿವೃದ್ಧಿ ಇವು ರಾಜಕೀಯಕ್ಕಿಂತ ದೊಡ್ಡ ವಿಷಯಗಳು.ವಿಜಯಪುರಕ್ಕೆ ಕಾಲೇಜು ಬರುವುದು ಜನರಿಗೆ ಬಲವಾಗಬೇಕು, ಯಾರಿಗೂ ಭಾರವಾಗಬಾರದು.ನಮ್ಮ ಒತ್ತಾಯ ಒಂದೇ:ನಿರ್ಧಾರ ಬೇಗ ಮಾಡಿ, ಕಾಲೇಜು ಬೇಗ ಆರಂಭಿಸಿ. ಜಿಲ್ಲೆ ಅಭಿವೃದ್ಧಿಯ ದಾರಿಗೆ ಶ್ರಿ ಬಸವರಾಜ ಹೂಗಾರನಿಕಟ ಪೂರ್ವ ಜಿಲ್ಲಾ ಅಧ್ಯಕ್ಷರುಬಿಜೆಪಿ ಯುವ ಮೋರ್ಚಾ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 