ಬಿರುಗಾಳಿ-ಮಳೆ ಧಾವ ಹಿ 18 ಮನೆಗಳು ನೆಲಕಚ್ಚಿ ಭಾರಿ ಹಾನಿ
Storm-rainstorm causes major damage, 18 houses razed to the ground
ಲೋಕದರ್ಶನ ವರದಿ
ಸಂಬರಗಿ 15: ಗಡಿಭಾಗದ ಗ್ರಾಮಗಳಲ್ಲಿ ಬುಧವಾರ ಸಾಯಂಕಾಲ ಬಿರುಗಾಳಿ ಮಳೆಯಿಂದ ಭಾರಿ ಹಾನಿಯಾಗಿದ್ದು, ಸಂಬರಗಿ ಗ್ರಾಮಕ್ಕೆ ತಹಶೀಲ್ದಾರ ಸಿದರಾಯ ಭೋಸಗಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ ಹಾಗೂ ಗ್ರಾಮದ ಅಭಿವೃದ್ಧಿ ಅಧಿಕಾರಿ ಧರೆಪ್ಪ ತಗಲಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ಮಾಡಿದರು. ಹಾನಿಯಾಗಿರುವ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದರು. ಸಂಬರಗಿ, ಶಿರೂರ, ಅನಂತಪೂರ, ಜಂಬಗಿ, ಅರಳಿಹಟ್ಟಿ, ಮದಭಾವಿ, ಜಕ್ಕಾರಟ್ಟಿ ಸೇರಿದ ಗ್ರಾಮಗಳಲ್ಲಿ ಭಾರಿ ಬಿರುಗಾಳಿ ಮಳೆಯಿಂದ ಹಾನಿಯಾಗಿದೆ. ರಸ್ತೆ ಬದಿಗೆ ಮರಗಳು ನೆಲಕ್ಕಚ್ಚಿವೆ. ತೋಟಪಟ್ಟಿ ವಸತಿಗಳಲ್ಲಿ ಭಾರಿ ಹಾನಿಯಾಗಿದೆ.
ಮನೆಯ ಪತ್ರಾಸ್ಗಳು ಹಾಗೂ ಸಂಬರಗಿ ಗ್ರಾಮದ ಬೀದಿ ದೀಪಗಳು ನೆಲಕ್ಕಚ್ಚಿವೆ. ಕಳೆದ 2 ದಿನದಿಂದ ಗಡಿಭಾಗದ ಗ್ರಾಮಗಳು ಕತ್ತಲೆಯಲ್ಲಿದ್ದಾವೆ. ತೋಟಪಟ್ಟಿ ವಸತಿಗಳಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ರೈತರಿಗೆ ಬಿರುಗಾಳಿ ಮಳೆಯಿಂದ ಭಯವಯ ವಾತಾವರಣ ನಿರ್ಮಾಣಗೊಂಡಿದೆ. ಸಂಬರಗಿ ಗ್ರಾಮದಲ್ಲಿ ಒಟ್ಟು 18 ಮನೆಗಳು ನೆಲಕಚ್ಚಿದ್ದಾವೆ. ಅವರಿಗೆ ಸರಕಾರದಿಂದ ಮನೆ ಮಂಜೂರಾತಿ ಮಾಡಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ. ಈ ಕುರಿತು ತಹಶೀಲ್ದಾರ ಸಿದರಾಯ ಭೋಸಗಿ ಇವರನ್ನು ಸಂಪರ್ಕಿಸಿದಾಗ, ಬಿರುಗಾಳಿ-ಮಳೆಯಿಂದ ಆಗಿರುವ ಹಾನಿಯನ್ನು ಪರೀಕ್ಷೆ ಮಾಡಲು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತ ಅಧಿಕಾರಿ, ಜಿಲ್ಲಾ ಪಂಚಾಯತ ಅಭಿಯಂತರರು ಇವರ ಸಂಯುಕ್ತದಿಂದ ಪರೀಶೀಲನೆ ಮಾಡಲಾಗುವುದು ಎಂದು ಹೇಳಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 