ಗದಗ 12: ರೋಗಿಗಳು ಆಸ್ಪತ್ರೆಗೆ ಬಂದಾಗ ಹೇಗೆ ಚಿಕಿತ್ಸೆ ಪಡೆದು ಕೊಳ್ಳಬೇಕು. ಅವರಿಗೆ ತೊಂದರೆ ಆದಲ್ಲಿ ಎಲ್ಲಿ ಹೇಗೆ ತಮ್ಮ ದೂರುಗಳನ್ನ ಸಲ್ಲಿಸಬೇಕು ಎಂಬುದರ ಬಗ್ಗೆ ಈಗಾಗಲೇ 4-5 ವರ್ಷಗಳಿಂದ ಈ ಯೋಜನೆ ಪ್ರಾರಂಭಿಸಿದ್ದು, ಇದನ್ನ ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯಮಟ್ಟದ ವೈದ್ಯಕೀಯ ಕಾನೂನು ಸಮ್ಮೇಳನ ಮೆಡಿಕೊ ಲಿಗಲ್ಕಾನ್ಫರೆನ್ಸ್ ಜೂನ್-14 ಮತ್ತು 15 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಏರಿ್ಡಸಲಾಗಿದೆ ಎಂದು ಡಾ.ಪವನ ಪಾಟೀಲ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಕಾರ್ಯಕ್ರಮಕ್ಕೆ ತಮಿಳನಾಡು, ಮಹಾರಾಷ್ಟ್ರ ರಾಜ್ಯಗಳಿಂದ ತಜ್ಞ ವೈದ್ಯರುಆಗಮಿಸಲಿದ್ದು, ಮೂಡ್ ಕೋರ್ಟ ಆಯೋಜಿಸಲು ಬೆಂಗಳೂರು ನಿಂದ 8-10 ಜನರ ಒಂದು ತಂಡ ನಡೆಸಿ ಕೊಡುತ್ತಾರೆ. ಐಎಂಎ ನಲ್ಲಿ 16ಜನ ವೈದ್ಯಕೀಯ ಪರಿಷತ್ ನಸದಸ್ಯರು ಇರುವರು. ಈ ಕಾರ್ಯಕ್ರಮಕ್ಕೆ ಡಾ.ವಾಯ್ ಸಿ ಯೋಗಾನಂದ ರಡ್ಡಿ ಮತ್ತುಡಾ.ಚಿನ್ನಾವಲ ಭಾಗಿಯಾಗುವರು. ಭಾರತೀಯ ವೈದ್ಯಕೀಯ ಸಂಸ್ಥೆಯು ಮುಂದಿನ ವರ್ಷ 100 ನೇ ವರ್ಷಕ್ಕೆ ಕಾಲಿಡುತ್ತಿದೆ ಎಂದು ಡಾ.ಪವನ ಪಾಟೀಲ ತಿಳಿಸಿದರು. ಪತ್ರಿಕಾ ಗೋಷ್ಠಿ ವೇಳೆ ಡಾ.ಅರವಿಂದ, ಡಾ. ಉದಯ ಕುಮಾರ, ಡಾ.ಅನುಪಮಾ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.