ಗದಗ 13 : ಜಗತ್ತಿಗೆ ಜ್ಞಾನ ನೀಡುವ ಕ್ಷೇತ್ರ ಕಾಶಿಯಾದರೆ, ಸಂಗೀತ ನೀಡುವ ಕಾಶಿ ಗದುಗಿನ ವಿರೇಶ್ವರ ಪುಣ್ಯಾಶ್ರಮವಾಗಿದೆ ಎಂದು ಕಾಶಿ ಪೀಠದ ಪೂಜ್ಯ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಗಳವರು ಹೇಳಿದರು.
ಅವರು ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ,
ಇದು ಕೇವಲ ಪುಣ್ಯಾಶ್ರಮವಲ್ಲ ಸಂಗೀತ ಕಾಶಿಯಾಗಿದೆ. ಮಗು ಆರೋಗ್ಯವಾಗಿದ್ದರೆ ಮನೆಯಲ್ಲಿ ಸಾಕುತ್ತಾರೆ. ಮಗು ವಿಕಲಚೇತನರಾದರೆ ತ್ಯಾಗ ಮಾಡುತ್ತಾರೆ. ಅಂತಹ ತ್ಯಾಗ ಮಾಡಿದ ಮಕ್ಕಳನ್ನು ಗುರುತಿಸಿ ಅವರುಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟವರು ದೇವಯೋಗಿ ಪೂಜ್ಯಶ್ರೀ ಹಾನಗಲ್ ಕುಮಾರಸ್ವಾಮಿಗಳು ಎಂದು ಹೇಳಿದರು.
ಪಂ.ಪುಟ್ಟರಾಜ ಕವಿ ಗವಾಯಿಗಳವರು ಸಾವಿರಾರು ಅಂಧ-ಅನಾಥ ವಿದ್ಯಾರ್ಥಿಗಳ ಜೀವನ ರೂಪಸಿದ ಪಂ. ಪುಟ್ಟರಾಜ ಕವಿ ಗವಾಯಿಗಳು ಸಂಗೀತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾರೆ. ಅದ್ದರಿಂದ ಪುಣ್ಯಾಶ್ರಮವನ್ನು ಸಂಗೀತ ಕಾಶಿ ಎಂದು ಹೇಳಿದರೆ ಬಹಳ ಒಳ್ಳೆಯದಾಗುತ್ತದೆ. ಆಶ್ರಮದಲ್ಲಿ ಕಲಿತ ವಿಧ್ಯಾರ್ಥಿಗಳಿಂದ ಬೆಳಗಿನಿಂದ ಬೆಳಗಾಗುವವರೆಗೂ ಸಂಗೀತ ಸಮಾರಾಧನೆಯೊಂದಿಗೆ ಉಭಯ ಶ್ರೀಗಳವರ ಪುಣ್ಯಸ್ಮರಣೆ ನಡೆಯುತ್ತದೆ ಎಂದರೆ ಅದು ಗದುಗಿನ ವಿರೇಶ್ವರ ಪುಣ್ಯಾಶ್ರಮದಲ್ಲಿ ಮಾತ್ರ ಎಂದು ಕಾಶಿ ಶ್ರೀಗಳು ಎಂದು ಹೇಳಿದರು.
ಹುಬ್ಬಳ್ಳಿಯ ಆಯುರ್ವೇದಿಕ್ ಮಹಾಮನೆಯ ವೈದ್ಯಶ್ರೀ ಚೆನ್ನಬಸವಣ್ಣ ಗುರೂಜಿ ಅವರು ಮಾತನಾಡಿ, ಮಕ್ಕಳು ಜಿಂಕ್ ಪುಡ್ ತಿನ್ನುವ ಮೂಲಕ ಕ್ಯಾನ್ಸ್ರ ರೋಗಕ್ಕೆ ತುತ್ತಾಗುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ಮಕ್ಕಳು ಕಲ್ಲು, ಕಟ್ಟಿಗೆ, ಮಣ್ಣಿನಲ್ಲಿ ಆಟವಾಡುತ್ತಿದ್ದರೆ, ಇಂದಿನ ಮಕ್ಕಳು ಮೋಬೈಲ್, ಟಿವಿಯಲ್ಲಿ ಮುಳುಗಿಹೋಗಿದ್ದಾರೆ. ಮಕ್ಕಳ ಆರೋಗ್ಯ ಬಗ್ಗೆ ಪಾಲಕರು ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.
ಚಳಗೇರಿ ಹಿರೇಮಠದ ಪೂಜ್ಯ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಉಭಯ ಶ್ರೀಗಳ ಜಯಂತಿಯನ್ನು ಸರಕಾರದಿಂದಲೇ ಆಚರಿಸುವಂತಾಗಬೇಕು. ಉತ್ತರ ಕರ್ನಾಟಕದಲ್ಲಿ ಉಭಯ ಗಳು ಅಭೂತಪೂರ್ವ ಸೇವೆಯನ್ನು ಸಲ್ಲಿಸುವ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡೆಸಿಕೊಂಡಿದ್ದಾರೆ ಎಂದು ಹೇಳಿದರು.
ವೇದಿಕೆ ಮೇಲೆ ಸೂಡಿ ಜುಕ್ತಿಹಿರೇಮಠದ ಪೂಜ್ಯಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.
ಎಮ್ಮಿಗನೂರ ಹಂಪಿ ಸಾವಿರ ದೇವರು ಮಹಾಮಹಂತರ ಸಂಸ್ಥಾನ ಗುರುಮಠದ ಪೂಜ್ಯ ವಾಮದೇವ ಮಹಾಂತ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಹೆಬ್ಬಾಳ ಸಂಸ್ಥಾನ ಬೃಹನ್ಮಠದ ಪೂಜ್ಯ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಸುಳ್ಳ-ಹೂಲಿ ಪಂಚಗೃಹಮಠದ ಪೂಜ್ಯ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅಡ್ನೂರ-ರಾಜೂರ ಬ್ರಹನ್ಮಠದ ಪೂಜ್ಯ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ನೆಗಳೂರು ಸಂಸ್ಥಾನ ಹಿರೇಮಠದ ಪೂಜ್ಯಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಲಿಂಗಸೂರ ಮಾಣಿಕೇಶ್ವರಿ ಆಶ್ರಮದ ಪೂಜ್ಯ ಶಿವಶರಣೆ ನಂದೀಶ್ವರಿ ಅಮ್ಮನವರು, ಗದುಗಿನ ಅಡವಿಂದ್ರಸ್ವಾಮಿ ಮಠದ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ, ಬಸವನ ಬಾಗೇವಾಡಿಯ ಪೂಜ್ಯ ಶಿವಪ್ರಕಾಶ ಸ್ವಾಮಿಗಳು ಸಮ್ಮುಖ ವಹಿಸಿದ್ದರು
ವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿ ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಮಾಡಿದರು.
ಈ ಸಂದರ್ಭದಲ್ಲಿ ಪಂ. ರಾಜಗುರು ಕಲಕೇರಿ, ನಿಂಗಪ್ಪ ಕೆಂಗಾರ, ಡಾ. ಬಸವರಾಜ ಬೊಮ್ಮನಹಳ್ಳಿ, ವಸಂತಗೌಡ್ರ ಪೊಲೀಸಪಾಟೀಲ, ಲಿಂಗರಾಜ ಗುಡಿಮನಿ, ಅನಿಲ್ ಅಬ್ಬಿಗೇರಿ, ಪ್ರಶಾಂತ ಶಾಬಾದಿಮಠ, ಮಹೇಶ ಶಾಬಾದಿಮಠ, ವಿಜಯಕುಮಾರ ಹಿರೇಮಠ, ರುದ್ರಯ್ಯಸ್ವಾಮಿ ಹಿರೇಮಠ, ಶಿರಗುಪ್ಪದ ಜಂಬನಗೌಡ್ರ, ವಿ.ಎಸ್. ಮಾಳೆಕೊಪ್ಪಮಠ, ಪಿ.ಸಿ.ಹಿರೇಮಠ, ಡಾ. ಸಿದ್ರಾಮಯ್ಯ ನಿಂಗಯ್ಯಮಠ, ಎಂ.ಆರ್.ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ “ಗೀತ ಮಂದಾರ” ಗ್ರಂಥ ಹಾಗೂ “ಪುಟ್ಟರಾಜ ಋಣಬಾರ” ಧ್ವನಿಸುರಳಿ ಬಿಡುಗಡೆಯಾದವು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿರೇಶ ಕೂಗು ಸ್ವಾಗತಿಸಿದರು. ಬಂಡಯ್ಯಶಾಸ್ತ್ರಿ ಸುಂಟನೂರ ಕಾರ್ಯಕ್ರಮ ನಿರೂಪಿಸಿದರು.