ಅದ್ದೂರಿಯಾಗಿ ಜರುಗಿದ ಶ್ರೀ ಸಿದ್ದಲಿಂಗೇಶ್ವರ ಮಹಾರಥೋತ್ಸವ
Sri Siddalingeshwara Maharathotsava celebrated with grandeur
ಪಾಲಬಾವಿ, 27 : ಸತ್ಯ ನುಡಿದು, ದಾನ ಮಾಡಿ ಧರ್ಮದಿಂದ ನಡೆದುಕೊಂಡು, ನ್ಯಾಯ- ನೀತಿ, ಹಾಗೂ ಸತ್ಸಂಗದಿಂದ ಜೀವನ ಮುಕ್ತಿ ಹೊಂದುವುದು, ಸಜ್ಜನರ ಸಂಗ ಮಾಡಿ ಒಳ್ಳೆಯ ಕಾರ್ಯ ಹಾಗೂ ಧರ್ಮದ ಸೇವೆ ಮಾಡುತ್ತ ಗುರುವಿನ ಭಕ್ತಿ ಮಾಡಿದರೆ ಗುರು ಸನ್ಮಾರ್ಗದೆಡೆಗೆ ಕರೆದೊಯ್ಯುವನು, ಭಾರತದಾದ್ಯಂತ ಒಳ್ಳೆಯ ಮಳೆ-ಬೆಳೆಯಿಂದ ಸಮೃದ್ದಿ ತಂಬಲಿ, ಭಕ್ತರ ಕಷ್ಟವು ದೂರವಾವುದು ಸದ್ಗುರುಗಳ ಆಶೀರ್ವಾದ ಸದಾಕಾಲವೂ ಇರಲಿದೆ ಎಂದು ಶ್ರೀಮಠದ ಪೀಠಾಧಿಪತಿ ಡಾ.ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ನಡೆದ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ದಿ.26 ಗುರುವಾರ ದಂದು ಸಾಯಂಕಾಲ 6ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಅಶೀರ್ವಚನ ನೀಡಿದರು.ಗುರುವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ, ಶ್ರೀ ಯಲ್ಲಾಲಿಂಗೇಶ್ವರ ಕೃರ್ತ ಗದ್ದುಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಮಂಗಳಾರುತಿ ನೆರವೇರಿಸಿದರು.
ಅಜ್ಜನ ಅಗ್ಗಿ ಜಾತ್ರೆ:ಶ್ರೀಮಠದ ಪರಂಪರೆಯಂತೆ ಮಾ.25 ಬುಧವಾರ ರಾತ್ರಿಯಿಂದ ಭಕ್ತರು ಮಡಿಯಿಂದ ಕಟ್ಟಿಗೆ ತಂದು ಬೆಂಕಿ ಮಾಡಿ ಅಗ್ನಿ ಕೊಂಡ ತಯಾರಿಸಿದರು. ಗುರುವಾರ ಮುಂಜಾನೆ 11ಕ್ಕೆ ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಲೋಕ ಕಲ್ಯಾಣಕ್ಕಾಗಿ, ಭಕ್ತರು ವರ್ಷವಿಡಿ ಪಾಪದ ಸಂಕೋಲೆಗಳನ್ನು ಸುಡಲೆಂದು ಅಗ್ನಿ ಹಾಯ್ದರು. ಎಲ್ಲ ಭಕ್ತಾದಿಗಳು ಅಗ್ನಿ ಕುಂಡದಲ್ಲಿ ನಾಣ್ಯಗಳನ್ನು ಹಾಕಿ ಸಿದ್ದಲಿಂಗ, ಯಲ್ಲಾಲಿಂಗ, ಸಿದ್ದರಾಮ ಎಂದು ಜಯಕಾರ ಹಾಕಿದರು.ಶ್ರೀ ಸಿದ್ಧಲಿಂಗೇಶ್ವರ ಶ್ರೀಗಳ ರಥೋತ್ಸವ: ಸಾಯಂಕಾಲ 6 ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ಪುಷ್ಪಗಳಿಂದ ಅಲಂಕರಿಸಿದ ಮಹಾರಥೋತ್ಸವ ಹಾಗೂ ಪುಪ್ಷವೃಷ್ಟಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗಿಯಾದ ಭಕ್ತ ಸಮೂಹ ರಥೋತ್ಸವಕ್ಕೆ ಖಾರಿಕ, ಬಿಸ್ಕೇಟ, ಬೆತ್ತಸ, ಬಾಳೆಹಣ್ಣು ಹಾರಿಸಿ ಗುರುಗಳಿಗೆ ಜೈಕಾರ ಹಾಕುತ್ತ ರಥೋತ್ಸವಕ್ಕೆ ನಮನ ಸಲ್ಲಿಸಿದರು. ಭಕ್ತರಿಂದ ಬುಧವಾರ ಸಾಯಂಕಾಲದಿಂದ ಗುರುವಾರ ಬೆಳಗಿನವರೆಗೂ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸ್ನಾನಮಾಡಿ ಮಡಿಯಿಂದ ಸುಮಾರು 8 ರಿಂದ 10 ಕಿ.ಮೀ ದೂರದಿಂದ ದಂಡೊತ್ತ (ದೀರ್ಘ ದಂಡ ನಮಸ್ಕಾರ) ಹಾಕಿ ತಮ್ಮ ಭಕ್ತಿ ಸಮರ್ಿಸಿದರು.
ರೈತ ಮುಖಂಡ ಚುನಪ್ಪ ಪೂಜಾರಿ ಇವರಿಗೆ ಶ್ರೀ ಮಠದಿಂದ ಕಾರು ಖರೀದಿಗೆ ರೂ.2 ಲಕ್ಷಗಳನ್ನು ನೀಡಿ ಸತ್ಕರಿಸಿ ಗೌರವಿಸಿದರು. ಆಸ್ಥಾನದ ಗವಾಯಿಗಳಿಂದ ಸಂಗೀತ ಸೇವೆ ನಡೆಯಿತು. ಈ ಭವ್ಯ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕವು ಸೇರಿದಂತೆ ಆಂಧ್ರ, ತೆಲಂಗಾಣ, ಗೋವಾ ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತರು ಪಾಲ್ಗೊಂಡಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 