ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆ: ಜಾತಿ ಕಾಲಂನಲ್ಲಿ ಸ್ವ ಜಾತಿ ಬರೆಸಿ: ವೇಣುಗೋಪಾಲ
Socio-Educational Economic Survey: Write your caste in the caste column: Venugopal
ಬಳ್ಳಾರಿ 22: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22 ರಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಜಾತಿ ಜನಗಣತಿ ನಡೆಯಲಿದೆ. ಈ ವೇಳೆ ಕ್ಷೌರಿಕ ಸಮುದಾಯದ ಜನರು ಜಾತಿ ಕಾಲಂ ನಲ್ಲಿ ಸವಿತಾ ಎಂದು ನಮೋದಿಸುವಂತೆ ಎಐಸಿಸಿ ಸದಸ್ಯರೂ ಆಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎಂಸಿ.ವೇಣುಗೋಪಾಲ್ ಸಲಹೆ ನೀಡಿದರು.
ನಗರದಲ್ಲಿ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಜಾತಿ ಜನಗಣತಿ ಸಮೀಕ್ಷೆ ಕುರಿತ ಜನಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಕಾರಣಕ್ಕೂ ತೋರಿಕೆ, ಆಡಂಬರಕ್ಕಾಗಿ ಮಾಹಿತಿಯನ್ನು ನೀಡಬಾರದು. ಇದರಿಂದ ಮುಂದಿನ ದಿನಗಳಲ್ಲಿ ಸಮಾಜಕ್ಕೆ ದೊರೆಯಬಹುದಾದ ಹೆಚ್ಚಿನ ಸೌಲಭ್ಯಗಳು ಕೈತಪ್ಪಬಹುದು ಎಂದು ಎಚ್ಚರಿಸಿದರು.
ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಶರಣಪ್ಪ ಮಾತನಾಡಿ ಸವಿತಾ ಸಮಾಜದ ಜಾತಿ ನಿಂದನೆ ಪದವನ್ನು ತೆಗೆದುಹಾಕಿಸಬೇಕು ಎಂದು ಮನವಿ ಮಾಡಿದರು. ಹೊಸಪೇಟೆ ನಗರಸಭಾ ಅಧ್ಯಕ್ಷ ರೂಪೇಶ್ ಕುಮಾರ್ ಮಾತನಾಡಿ, ಸವಿತಾ ಸಮಾಜದ ಎಲ್ಲಾ ಬಾಂಧವರು ಒಟ್ಟಾಗಿ ಜಾತಿ ಸಮೀಕ್ಷೆಯಲ್ಲಿ "ಸವಿತಾ" ಎಂದು ಬರೆಸಿ, ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸವಿತಾ ಸಮಾಜದ ಕಾರ್ಯಕಾರಿಣಿ ಸದಸ್ಯ ತಿಪ್ಪಣ್ಣ, ಹಿರಿಯ ಮುಖಂಡ ಶಿವಶಂಕರ್ ಬೆಂಗಳೂರು, ಹಾಗೂ ಆನಂದ್ ಸಿಂಗ್ ಕೌಲ್ ಬಜಾರ್, ಪ್ರಕಾಶ್, ಚಿನ್ನು ಜಿಲ್ಲಾಧ್ಯಕ್ಷರಾದ ರಾಕೇಶ್, ತಾಲೂಕು ಅಧ್ಯಕ್ಷ ಶೇಖಣ್ಣ, ಸೇರಿದಂತೆ ಸಮಾಜದ ನೂರಾರು ಮುಖಂಡರುಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 