ಸಮಾಜಿಕ ಕಾರ್ಯಕರ್ತ ಪ್ರಭು ಸಣ್ಣಕ್ಕಿಗೆ ಸನ್ಮಾನ
Social activist Prabhu Sannakki honored
ತಾಳಿಕೋಟೆ, 17 : ಪಟ್ಟಣದ ಶರಣಸಾಹಿತ್ಯ ಪರಿಷತ್ತು, ಯುವ ಘಟಕ, ಕದಳಿ ವೇದಿಕೆ ವತಿಯಿಂದ ಸ್ಥಳೀಯ ಅಗ್ನಿ ಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಪ್ರಭು ಸಣ್ಣಕ್ಕಿ ಅವರು ಹುಬ್ಬಳ್ಳಿಗೆ ವರ್ಗವಾದ ಹಿನ್ನೆಲೆಯಲ್ಲಿ ಶುಕ್ರವಾರ ಗೌರವಿಸಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಜಿ.ಎಸ್.ಜಮ್ಮಲದಿನ್ನಿ, ಕುಮಾರೇಶ್ವರ ಹಿರಿಯಪ್ರಾಥಮಿಕ ಶಾಲೆಯ ಕಾಶಿನಾಥ ಸಜ್ಜನ, ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಗುಂಡುರಾವ್ ಧನಪಾಲ, ಜೆ.ಎಸ್.ಜಿ.ಪಿಯು ವಿಜ್ಞಾನ ಕಾಲೇಜಿನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಮಾತನಾಡಿ, ವೃತ್ತಿಯಿಂದ ಅಗ್ನಿ ಶಾಮಕದಲ್ಲಿ ಕಾರ್ಯ ನಿರ್ವಹಿಸುತ್ತ ಗಾಯಕರಾಗಿ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಪ್ರಭು ಸಣ್ಣಕ್ಕಿ ಗುರುತಿಸಿಕೊಂಡಿದ್ದಾರೆ. ಸಹೃದಯಿ, ಸ್ನೇಹಮಯಿ, ಯಾಗಿದ್ದಾರೆ. ತಾಳಿಕೋಟೆಯಲ್ಲಿ ಬೆಳೆದ ಮರ ಹುಬ್ಬಳ್ಳಿಯಲ್ಲಿ ಕಂಪು ಸೂಸಲಿ ಎಂದರು. ಸಿದ್ದು ಕರಡಿ ನಿರ್ವಹಿಸಿದರು. ಪ್ರಭು ಸಣ್ಣಕ್ಕಿ ಪ್ರಾರ್ಥಿಸಿದರು.
ಶರಣು ಗಡೇದ ವಂದಿಸಿದರು. ವೇದಿಕೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಜಗದೀಶ ಬಿಳೇಭಾವಿ, ಮಹದೇವಪ್ಪ ಕುಂಬಾರ ಇದ್ದರು. ಕಾರ್ಯಕ್ರಮದಲ್ಲಿ ಗಂಗಾಧರ ಕಸ್ತೂರಿ, ಶಿವಲಿಂಗಪ್ಪ ಪಾಲ್ಕಿ, ಈರಣ್ಣ ಕಲಬುರ್ಗಿ, ರಮೇಶ ಸಾಲಂಕಿ,, ಟಿ.ಸಿ.ಸಜ್ಜನ, ಎ.ಎಂ.ಮೂಲಿಮನಿ, ಅಶೋಕ ಚಿನಗುಡಿ, ಸಂತೋಷ, ಶ್ರೀನಿವಾಸ,ಶ.ಸಾ.ಪ. ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ, ಡಾ.ನಡುವಿನಕೇರಿ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 