ಡಿ.ಎಫ್‌.ಓ ಮಂಜುನಾಥ ನಾವಿ 73ಕಿ.ಮೀ. ರಸ್ತೆ ಬದಿ ಗಿಡ ಬೆಳಸಿದ ಸಾಧನೆ

Social Forestry Department takes care of 72000 trees

ಸಾಮಾಜಿಕ ಅರಣ್ಯ ಇಲಾಖೆಯಿಂದ 72000 ಗಿಡಗಳ ಆರೈಕೆ

ಕಾರವಾರ 07 : ಕಾರವಾರ ಸಾಮಾಜಿಕ ಅರಣ್ಯ ವಿಭಾಗದ ಮೂಲಕ 2024-25 ರ ಸಾಲಿನಲ್ಲಿ ನೆಡುತೋಪು ನಿರ್ಮಾಣಕ್ಕಾಗಿ 72000 ಗಿಡಗಳನ್ನು ಆರೈಕೆ ಮಾಡಿದೆಸಾಮಾಜಿಕ ಅರಣ್ಯ ವಿಭಾಗದ ಡಿ.ಎಫ್‌.ಓ ಮಂಜುನಾಥ್ ನಾವಿ ತಿಳಿಸಿದರು. ಅವರು ಶನಿವಾರ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗದ ಪ್ರಗತಿ ಚಟುವಟಿಕೆಗಳ ಕುರಿತು ಪತ್ರಕರ್ತರಿಗೆ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು.ಸಾರ್ವಜನಿಕ ವಿತರಣೆಗಾಗಿ 10000 ಗಿಡಗಳನ್ನು ಬೆಳೆಸಿ ವಿತರಿಸಿರುವುದು ಮಾತ್ರವಲ್ಲದೇ ,ಮನರೇಗಾ ಕಾಮಗಾರಿಗಳ ಮೂಲಕ 91000 ಮಾನವ ದಿನಗಳನ್ನು ಸೃಜಿಸುವ ಮೂಲಕ ಅತ್ಯಂತ ಗಮನಾರ್ಹ ಸಾಧನೆ ಮಾಡಲಾಗಿದೆ ಎಂದರು.ಸಾಮಾಜಿಕ ಅರಣ್ಯ ಇಲಾಖೆಯ ಮೂಲಕ ಭೂ ಸಾರಸಂರಕ್ಷಣೆ (ಅರಣೀಕರಣ) ಬೀಳು ಭೂಮಿಗಳ ಮಣ್ಣಿನ ಫಲವತ್ತತೆ ಹಾಗೂ ಮೇಲ್ಪದರದ ಮಣ್ಣಿನ ಸವಕಳಿ ತಡೆಗಟ್ಟಲು ನೆಡುತೋಪುಗಳನ್ನು ಬೆಳೆಸುವುದು. ಸಸಿಗಳನ್ನು ಬೆಳೆಸಿ ಅಭಿವೃದ್ಧಿ ಪಡಿಸಲಗಿದೆ. ಗ್ರಾಮಿಣ ಜನರಿಗೆ ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು ಬೆಳೆಸಿ ನೆಡುವ ಬಗ್ಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗುತ್ತಿದೆ.  

 ಅಲ್ಲದೇ ರೈತರಿಗೆ ತಮ್ಮ ಕ್ಷೇತ್ರದಲ್ಲಿ ನೆಡುತೋಪು ಬೆಳೆಸುವುದು ಮುಖ್ಯ ಉದ್ದೇಶ ಎಂದರು.ಕಂದಾಯ ಇಲಾಖೆಯ ಬಂಜರು ಭೂಮಿಯಲ್ಲಿ ಸಸಿ ನೆಟ್ಟು ಅಭಿವೃದ್ಧಿ ಪಡಿಸುವುದು. ರೈತರ ಗದ್ದೆಯಗಡಿ ಸುತ್ತಲೂ, ರಸ್ತೆ ಅಂಚಿನಲ್ಲಿ, ಹಳ್ಳ ಕೊಳ್ಳದ ಬದಿಯಲ್ಲಿ, ಖಾಲಿ ಬಿದ್ದ ಅರಣ್ಯ, ಶಾಲೆ ಬಯಲು ಹಾಗೂ ಸರಕಾರಿ ಜಮೀನಿನಲ್ಲಿ ಗಿಡ ಬೆಳೆಸಿ ನಾಡನ್ನು ಹಸಿರಾಗಿಸುವುದು ಉದ್ದೇಶ ಹೊಂದಲಾಗಿದೆ ಎಂದರು.2024-25 ನೇ ಸಾಲಿನಲ್ಲಿ ಸಾಮಾಜಿಕ ಅರಣ್ಯ ಯೋಜನೆಯಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ತಾಲೂಕುಗಳಾದ ಹಳಿಯಾಳ, ಜೋಯಿಡಾ, ದಾಂಡೇಲಿ, ಕಾರವಾರ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಅಂಕೋಲಾ, ಕುಮಟಾ, ಯಲ್ಲಾಪುರ, ಮುಂಡಗೋಡ ತಾಲೂಕುಗಳಲ್ಲಿ ಸರಕಾರದ ವಿವಿಧ ಯೋಜನೆಗಳಾದ, ಸಾಮಾಜಿಕ ಅರಣ್ಯ ಯೋಜನೆ,ರಸ್ತೆ ಬದಿ ನೆಡುತೋಪು ಯೋಜನೆ,ನಗರ ಪ್ರದೇಶ ಹಸರೀಕರಣ ಮನರೇಗಾ, ಹಸಿರು ಆಯವ್ಯಯ ಯೋಜನೆಗಳಡಿ 140.98 ಹೆಕ್ಟೇರ್ ಮತ್ತು 73.623 ಕಿ.ಮೀ ನಡುತೋಪು ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. 

 ಹಿಪ್ಪೆ, ನೇರಳೆ, ಅರಳಿ,ತಪಸಿ ಜಾತಿಯ ಸಸಿಗಳು :ಸಾರ್ವಜನಿಕರಿಗೆ, ರೈತರಿಗೆ, ಸಂಘ ಸಂಸ್ಥೆಗಳಿಗೆ ಉಚಿತವಾಗಿ, ರಿಯಾಯಿತಿ ದರದಲ್ಲಿ ವಿತರಣೆಗಾಗಿ ಆರ.ಎಸ್‌.ಪಿ.ಡಿ. ಹಸಿರು ಕರ್ನಾಟಕ ಯೋಜನೆಯಡಿ ಬೇಡಿಕೆಯನುಸಾರ ಹೊಂಗೆ, ಮಹಾಗನಿ, ಕಾಡು ಬದಾಮ, ಹಿಪ್ಪೆ, ನೇರಳೆ, ಅರಳಿ,ತಪಸಿ, ಕಾಯಧೂಪ, ಮಾವು, ಸಾಲಧೂಪ, ತಾರೆ, ಕದಂಬ, ಹೊಳೆಮತ್ತಿ, ಹೊಳೆದಾಸವಾಳ, ರಾಮಪತ್ರೆ, ಅತ್ರಿ, ಬಿಲ್ಕಂಬಿ, ಸಿಮರೂಬ, ಹೆದ್ದಿ, ಮದ್ದಾಲೆ, ಮುರುಗಲ, ಗೇರು, ಸೀತಾಅಶೋಕ, ವಾಟೆ, ಉಪ್ಪಾಗೆ, ಗುಲಬೋಹರ, ತಪಸಿ, ಅಂಟವಾಳ, ಕಕ್ಕೆ, ಕ್ಯಾಲೋಫಿಲಂ, ಕ್ಯಾಸೊರಿನಾ. ಸಿಹಿ ಹುಣಸೆ, ಸೀಸಂ, ಸಾಗವಾನಿ ಇತ್ಯಾದಿ ಸ್ಥಳೀಯ ಜಾತಿಯ ಒಟ್ಟೂ 10929 ಸಂಖ್ಯೆಯ ಸಸಿಗಳನ್ನು ಬೆಳೆಸಿಕೊಳ್ಳಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 77000 ಸಂಖ್ಯೆಯ ಸಸಿಗಳನ್ನು ಬೆಳೆಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದರು. 

 ಉದ್ಯೋಗ ಸೃಷ್ಟಿ :ಗ್ರಾಮೀಣ ಭಾಗದ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಮನರೇಗಾ ಯೋಜನೆಯಡಿ ಅರಣೀಕರಣ, ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿ, ರೈತರ ಜಮೀನಿನಲ್ಲಿ ಸಸಿ ನೆಡುವ ಕಾಮಗಾರಿ ಹಾಗೂ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, 2024-25ನೇ ಸಾಲಿನಲ್ಲಿ 91315 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ತಿಳಿಸಿದರು.ಆರ.ಕೆ.ವಿ.ವೈ, ಯೋಜನೆಯಡಿ ಇಲಾಖಾ ಸಸಿಗಳನ್ನು ಬೆಳೆಸಿಕೊಳ್ಳಲು. ಕೋಡಿಬಾಗ, ಅಗಸೂರು. ಕಾಸರಕೋಡ, ಬಾಚಣಕಿ, ಕವಡಿಕೆರೆ ಗಳಲ್ಲಿ ನರ್ಸರಿಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ರೈತರಿಗೆ ಕೃಷಿ ಅರಣ್ಯದ ಬಗ್ಗೆ ಜಾಗೃತಿ ಮೂಡಿಸುವ ಕುರಿತು ತರಬೇತಿ ಕಾರ್ಯಗಾರಗಳನ್ನು ಏರಿ​‍್ಡಸಲಾಗುತ್ತಿದೆ ಎಂದರು.ಸಾಮಾಜಿಕ ಅರಣ್ಯ ವಲಯಗಳ ವಲಯ ಅರಣ್ಯಾಧಿಕಾರಿಗಳಿಗೆ ವಲಯ ಕಚೇರಿ ಮತ್ತು ವಸತಿ ಗೃಹಗಳು ಇಲ್ಲದ ಕಾರಣ ಹೊಸದಾಗಿ ಕುಮಟಾ,ಮುಂಡಗೋಡ, ಶಿರಸಿ,ಯಲ್ಲಾಪುರ ವಲಯಗಳಲ್ಲಿ ವಲಯ ಕಚೇರಿ ಮತ್ತು ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಹಾಗೂ ಪ್ರಸಕ್ತ ಸಾಲಿನಲ್ಲಿ ಹೊನ್ನಾವರ ಮತ್ತು ಸಿದ್ದಾಪುರ ವಲಯಗಳಲ್ಲಿ ವಲಯ ಕಚೇರಿ ಮತ್ತು ವಸತಿ ಗೃಹ ನಿರ್ಮಾಣದ ಗುರಿಯನ್ನು ಹೊಂದಲಾಗಿದ್ದು, ಜಿಲ್ಲಾ ಪಂಚಾಯತ ಅನಿಭಂರ್ದಿತ, 15ನೇ ಹಣಕಾಸು, ಮನರೇಗಾ ಯೋಜನೆಯಡಿ ಭೀಮಕೋಲ ಹಾಗೂ ನಾಗರಮುಡಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.ಪ್ರವಾಸಿ ತಾಣ ಭೀಮಕೋಲ:ಪ್ರವಾಸಿ ತಾಣ ಭೀಮಕೋಲ, ದೇವಳಮಕ್ಕಿ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಸಾಮಾಜಿಕ ಅರಣ್ಯ ವಿಭಾಗದಿಂದ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಹರಿಕಿರಣ ಭಟ್ ಉಪಸ್ಥಿತರಿದ್ದರು.