ಶಾರ್ಟ್ ಸರ್ಕ್ಯೂಟ್: ಕಬ್ಬು ಬೆಳೆ ಭಸ್ಮ
Short circuit: Sugarcane crop burnt to ashes
ಇಂಡಿ 29: ತಾಲೂಕಿನ ತಡವಲಗಾ ಗ್ರಾಮದ ರೈತನಾದ ಶ್ರೀಶೈಲ ಮಳಸಿದ್ದಪ್ಪ ವಾಡಿ ಸರ್ವೇ ನಂಬರ್ 336 ಪೈಕಿ ನಾಲ್ಕು ಎಕರೆ ಜಮೀನು ರೈತನಿಗೆ ಸೇರಿದ ಕಬ್ಬಿನ ತೋಟಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಆಗಿ ಸುಮಾರು ಆರು ಲಕ್ಷ ರೂ. ಮೌಲ್ಯದ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀಶೈಲ ಮಳಸಿದ್ದಪ್ಪ ವಾಡಿ ಎಂಬುವರ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಹರಿದು ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಬ್ಬಿನ ಹೊಲ ಸುಟ್ಟಿದೆ. ಜಮೀನಿನಲ್ಲಿ ಬೆಳೆದ 6 ಲಕ್ಷ ರೂ. ಮೌಲ್ಯದ 200 ಟನ್ ನಷ್ಟು ಕಬ್ಬು ಸುಟ್ಟಿದೆ.ಈ ಸುದ್ದಿ ಇಂಡಿ ಅಗ್ನಿಶಾಮಕ ದಳದ ಸಿಬ್ಬಂದಿ ಕರೆ ಮಾಡಿದ ರೈತನಿಗೆ ಇಂಡಿ ತಾಲೂಕಿನ ಅಗ್ನಿಶಾಮಕ ಠಾಣೆಯಲ್ಲಿ ಇರುವುದು ಒಂದೇ ಒಂದು ಅಗ್ನಿಶಾಮಕ ಗಾಡಿ, ಆ ಗಾಡಿ ಅಹಿರಸಂಗ ಗ್ರಾಮದಲ್ಲಿ ಅಗ್ನಿ ನಂದಿಸಲು ಹೋಗಿದೆ ಹಾಗೂ ಇನ್ನೊಂದು ಕೆಟ್ಟು ನಿಂತಿದೆ ಎಂದು ಹೇಳಿದರು.
ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿಗಳು ಬಂದು ಪರೀಶೀಲನೆ ಮಾಡಿದರು. ನಂತರ ಮಾತನಾಡಿದ ಹೆಸ್ಕಾಂ ವಲಯ ಅಧಿಕಾರಿ ಬಾಬಾನಗರ ಅವರು ಈ ಹೊಲದಲ್ಲಿ ಎಲ್ ಟಿ ಲೈನ್ ಹಾದು ಹೋಗಿದ್ದು ಅದು ಕಟ್ ಆಗಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ಎಕರೆ ಕಬ್ಬು ಸುಟ್ಟು ಹೋಗಿದೆ ಎಂದು ಹೇಳಿದರು.
ಈ ಸುದ್ದಿ ತಿಳಿದು ತಡವಲಗಾ ಆಡಳಿತ ಅಧಿಕಾರಿ ಮಂಜುನಾಥ ಗುರುಬಟ್ಟಿ ಭೆೇಟಿ ನೀಡಿ ಪರೀಶೀಲನೆ ಮಾಡಿ ಪಂಚನಾಮೆ ಮಾಡಿದರು. ಆದರೆ ಹೆಸ್ಕಾಂ ಅಧಿಕಾರಿಗಳ ಬೇಜಾಬ್ದಾರಿಯಿಂದ ನನ್ನ ಕಬ್ಬು ಕಳೆದುಕೊಂಡೆ ಎಂದು ನೊಂದ ರೈತನ ಗೋಳು ಹೇಳತೀರದಾಗಿತ್ತು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 