ಕಾನಿಪ ವಾರ್ಷಿಕ ಪ್ರಶಸ್ತಿಗೆ ಶಿವಾನಂದ ಹಿರೇಮಠ ಆಯ್ಕೆ

ಕಾನಿಪ ವಾರ್ಷಿಕ ಪ್ರಶಸ್ತಿಗೆ ಶಿವಾನಂದ ಹಿರೇಮಠ ಆಯ್ಕೆ  Shivananda Hiremath selected for Kanip Annual Award

ಲೋಕದರ್ಶನ ವರದಿ 

ಗದಗ 01 :  ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ 2024ನೇ ವಾರ್ಷಿಕ ಪ್ರಶಸ್ತಿಗಳು ಮಂಗಳವಾರ ಪ್ರಕಟವಾಗಿದ್ದು ಟಿ.ಕೆ. ಮಲಗೊಂಡು ತನಿಖಾ ವರದಿ ಪ್ರಶಸ್ತಿಗೆ  ಗದಗ ಜಿಲ್ಲೆಯ ವಿಜಯವಾಣಿ ದಿನಪತ್ರಿಕೆ ಹಿರಿಯ ವರದಿಗಾರರಾದ  ಶಿವಾನಂದ ಹಿರೇಮಠ ಭಾಜನರಾಗಿದ್ದಾರೆ.   ಇದೇ ಏಪ್ರಿಲ್ 11 ಮತ್ತು 12 ರಂದು ಬೀದರನಲ್ಲಿ ಜರಗುವ  40 ನೇ ರಾಜ್ಯಮಟ್ಟದ ಪತ್ರಕರ್ತರ  ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಶಸ್ತಿ ಬಾಜನರಾದ ಶಿವಾನಂದ ಹಿರೇಮಠ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ರಾಜು ಹೆಬ್ಬಳ್ಳಿ ಅವರು ಸೇರಿದಂತೆ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾರ್ಯಕಾರಿ ಮಂಡಳಿ  ಹಾಗೂ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.