ಶಿವರಾತ್ರಿ ಅಂಗವಾಗಿ ಶಿವಯೋಗ ಕಾರ್ಯಕ್ರಮ

ಶಿವರಾತ್ರಿ ಅಂಗವಾಗಿ ಶಿವಯೋಗ ಕಾರ್ಯಕ್ರಮ Shiva Yoga program as part of Shivaratri

 

ಹುಬ್ಬಳ್ಳಿ 13: ಬಸವ ಕೇಂದ್ರದ ವತಿಯಿಂದ ಶಿವರಾತ್ರಿ ಅಂಗವಾಗಿ ಶಿವಯೋಗ  (ಸಾಮೂಹಿಕ ಇಷ್ಠಲಿಂಗ ಪೂಜೆ ಹಾಗೂ ಯೋಗ) ಕಾರ್ಯಕ್ರಮ ಹಾಗೂ ಶರಣ ಡೋಹರ ಕಕ್ಕಯ್ಯನವರ ಜಯಂತಿ ಕಾರ್ಯಕ್ರಮವನ್ನು ರವಿವಾರ ದಿನಾಂಕ 15-02-2026 ರಂದು ಮುಂಜಾನೆ 9 ಗಂಟೆಗೆ ಗೋಕುಲ ರಸ್ತೆ, ಮುರಾರ್ಜಿನಗರ 2ನೇ ಹಂತ, ಬಸವ ಕೇಂದ್ರದ (ವಿ.ಎಂ.ಕೊಟಗಿ ಬಸವ ಸಂಸ್ಕೃತಿ ಶಾಲೆಯ) ಸಭಾಭವನದಲ್ಲಿ ಆಯೋಜಿಸಲಾಗಿದೆ. ಬಸವ ಕೇಂದ್ರದ ಅಧ್ಯಕ್ಷ  ಪ್ರೊ ಜಿ.ಬಿ.ಹಳ್ಳಾಳ ಅವರು ಶಿವಯೋಗ ಚಿಂತನ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಕೊಪ್ಪಳದ ಶರಣ ತತ್ವ ಚಿಂತಕರಾದ ಡಾ ಸಂಗಮೇಶ ಕಲಹಾಳ್ ಅವರು ಅತಿಥಿಗಳಾಗಿ ಭಾಗವಹಿಸುವರು. ಆಸಕ್ತ ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ತಿಳಿಸಿದ್ದಾರೆ. ಇಷ್ಟಲಿಂಗ ದೀಕ್ಷೆ ನೀಡಲಾಗುವುದು. ಲಿಂಗಗಳು, ಲಿಂಗ ಚೀಲಗಳು, ವಿಭೂತಿ, ರುದ್ರಾಕ್ಷಿ, ಪುಸ್ತಕಗಳು ಲಭ್ಯವಿರುತ್ತವೆ. 


Shivaratri Basava Kendra Shivayoga