ವಿದ್ಯುತ್ ಅವಘಡದಿಂದ ಕುರಿಗಾರ ಸಾವು: ಹೆಸ್ಕಾಂ 5ಲಕ್ಷ ಪರಿಹಾರ ವಿತರಣೆ

ವಿದ್ಯುತ್ ಅವಘಡದಿಂದ  ಕುರಿಗಾರ ಸಾವು: ಹೆಸ್ಕಾಂ 5ಲಕ್ಷ ಪರಿಹಾರ ವಿತರಣೆ Sheepherder dies due to electrical failure: HESCOM distributes Rs. 5 lakh compensation

ಗದಗ 20:  ಗ್ರಾಮೀಣ ವಿಭಾಗದ ವ್ಯಾಪ್ತಿಯಲ್ಲಿ ಬರುವಕೆ.ಎಚ್‌.ಬಿ. ಕಳಸಾಪೂರ ರಸ್ತೆಯಲ್ಲಿ 2024ರ ಸೆಪ್ಟಂಬರ್ 11 ರಂದು ಬೆಳಗಾವಿ ಜಿಲ್ಲೆಯಇಂಡಿತಾಲ್ಲೂಕಿನ ವಾಳಕಿ ಗ್ರಾಮದ ವಿಠ್ಠಲ ಮಲ್ಲಪ್ಪ ಹಿರೇಕುಡಿಎಂಬುವರುಕುರಿಕಾಯಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್‌ತಂತಿತುಳಿದು  ಮೃತಪಟ್ಟಿದ್ದರಿಂದ  ಹೆಸ್ಕಾಂ ನಿಗಮದಿಂದ ಮೃತಕುಟುಂಬದವರಿಗೆ ಪರಿಹಾರಧನವಾಗಿ 5 ಲಕ್ಷರೂ.ಗಳ ಚೆಕ್‌ನ್ನು ವಿತರಿಸಲಾಯಿತು.  

ಈ ಸಂದರ್ಭದಲ್ಲಿ ಹಿರಿಯರಾದಎಂ.ಆರ್‌. ಪಾಟೀಲ, ಜಿಲ್ಲಾ ಪಂಚಾಯತ ಮಾಜಿಅಧ್ಯಕ್ಷ ವಾಸಣ್ಣಕುರಡಗಿ, ಹಾಲುಮತ ಮಹಾಸಭಾದರಾಜ್ಯಾಧ್ಯಕ್ಷರುದ್ರಣ್ಣ ಗುಳಗುಳಿ, ಹೆಸ್ಕಾಂ ಇಇ ರಾಜೇಶಕಲ್ಯಾಣಶೆಟ್ಟಿ,   ಹಾಲುಮತ ಮಹಾಸಭಾದಗೌರಾಧ್ಯಕ್ಷ ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ,ರಾಘು ವಗ್ಗನವರ,  ಮುತ್ತುಜಡಿ, ಕುರುಬರ ಸಂಘದಯುವಘಟಕದಜಿಲ್ಲಾಧ್ಯಕ್ಷ ಮಂಜುನಾಥಜಡಿ, ಕುಮಾರ ಮಾರನಬಸರಿ, ಶಹರ ಎಇಇ ನಾಗರಾಜಕುರಿಯವರ, ಗ್ರಾಮೀಣ ಎಇಇ ಪಿ.ಆರ್‌. ಹೊಸಳ್ಳಿ, ಶಾಖಾಧಿಕಾರಿ ವಿಷ್ಣು ತಿಮ್ಮನತಿರ್ಲಾ, ಗುತ್ತಿಗೆದಾರರಾದ ಮಲ್ಲಪ್ಪಕೀಂದ್ರಿಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.