ಶರಣ ಮುತ್ಯಾರವರ ಜಾತ್ರಾ ಮಹೋತ್ಸವ ಸಂಪನ್ನ
Sharan Mutya's festival is complete
ತಾಳಿಕೋಟೆ 09: ಪಟ್ಟಣದ ಆರಾದ್ಯ ದೈವವೆನ್ನಿಸಿರುವ ಸ್ಥಳೀಯ ಸದ್ಗುರು ಸಾಂಭಪ್ರಭು ಶರಣಮುತ್ಯಾರವರ ಜಾತ್ರಾ ಮಹೋತ್ಸವದಂಗವಾಗಿ ಭವ್ಯ ರಥೋತ್ಸವವು ಭಾನುವಾರ ಭಕ್ತಿ, ಶ್ರದ್ಧೆ, ಸಂಭ್ರಮಗಳಿಂದ ಭಾನುವಾರ ಸಂಜೆ ನೆರವೇರಿತು. ತನ್ನಿಮಿತ್ತ ಬೆಳಿಗ್ಗೆ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಪುರವಂತರ ಸೇವೆಯೊಂದಿಗೆ ಸಾಂಭಪ್ರಭು ಶರಣರ ಮಠದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಂಭಪ್ರಭು ದೇವಸ್ಥಾನವನ್ನು ತಲುಪಿತು. ಉತ್ಸವದಲ್ಲಿ ಛತ್ರಿ ಚಾಮರ, ಭಕ್ತ ಜನರ ಭಜನೆ, ಭಾಜಾ ಭಜಂತ್ರಿ ನಡೆದವು.ಪಲ್ಲಕ್ಕಿ ಉತ್ಸವವು ದೇವಸ್ಥಾನ ತಲುಪಿ ದೇವಸ್ಥಾನ ಪಂಚಪ್ರದಕ್ಷಿಣೆ ಹಾಕಿ ಕರ್ತೃ ಗದ್ದುಗೆಗೆ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದಲೇ ಭಕ್ತಾದಿಗಳು ದೇವರಿಗೆ ನೈವೇದ್ಯ, ಕಾಯಿ, ಕಪೂರ ಅರ್ಿಸಿದರು. ರಥೋತ್ಸವದಲ್ಲಿ ನೇತೃತ್ವವನ್ನು ವಹಿಸಿದ್ದ ಸಾಂಭಪ್ರಭು ಶರಣರಮಠದ ಬಸಣ್ಣನವರು ಶರಣರು ಹಾಗೂ ಶರಣಪ್ಪನವರು ಶರಣರು, ಅವರ ಪರಿವಾರದವರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ರಥಕ್ಕೆ ಪೂಜಾ ವಿಧಾನಗಳು ಮುಗಿದು ಪಲ್ಲಕ್ಕಿ ಪಂಚ ಪ್ರದಕ್ಷಿಣದ ನಂತರ ಭಕ್ತಾದಿಗಳ ಹರ್ಷೋದ್ಘಾರದ ಮಧ್ಯೆ ರಥೋತ್ಸವ ಜರುಗಿತು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ ವ್ಯವಸ್ಥೆ ಮಾಡಲಾಗಿತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 