11ನೇ ಶತಮಾನದ ಪುರಾತನರ ಭಕ್ತಿಗೂ 12ನೇ ಶತಮಾನದ ಶರಣರ ಭಕ್ತಿಗೂ ಇರುವ ವ್ಯತ್ಯಾಸವೇನು? : ನೀಲಮ್ಮತಾಯಿ

11ನೇ ಶತಮಾನದ ಪುರಾತನರ ಭಕ್ತಿಗೂ 12ನೇ ಶತಮಾನದ ಶರಣರ ಭಕ್ತಿಗೂ ಇರುವ ವ್ಯತ್ಯಾಸವೇನು? : ನೀಲಮ್ಮತಾಯಿ Sharan Charitamrata discourse for the month of Shravan

ಶ್ರಾವಣ ಮಾಸದ ಶರಣ ಚರಿತಾಮ್ರತ ಪ್ರವಚನ  

ಗದಗ-18: ಪುರಾತನರು ಮರ್ತ್ಯ ಲೋಕದಲ್ಲಿ ಭಕ್ತಿಯ ಮನೆ ಕಟ್ಟಿಕೊಂಡು ಇದ್ದರು. ನಿಜ ಆದರೆ ಅವರು ಭಕ್ತಿಯ ಮಾಡಿ ಸ್ವರ್ಗಕ್ಕೆ ಹೋದರು ಎಂದು ಆಧ್ಯಾತ್ಮ ವಿದ್ಯಾಶ್ರಮದ ಶರಣೆ ನೀಲಮ್ಮತಾಯಿಯವರು ಮಾತನಾಡಿದರು.  

ಅವರಿಂದು ಗದಗ ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಶರಣ ಚರಿತಾಮ್ರತ ಪ್ರವಚನದಲ್ಲಿ ಮಾತನಾಡುತ್ತಾ, ಭಕ್ತಿಯ ವ್ಯವಹಾರ ಮಾಡಿದರು. ಸಾಮಿಪ್ಯ, ಸಾರುಪ್ಯ, ಸಾಲುಕ್ಯ, ಸಾಯುಜ್ಯ ಎಂಬ ನಾಲ್ಕು ವಿಧ ಪದವಿಗೊಳಗಾದರು. ಈ ಪದವಿಗಳಿಂದಾಚೆ ನಿಜದ ನಿಲುವು ಉಳ್ಳ ನಿಜ ಬಕ್ತಿಯ ನಿಲುವು ಗುರುತಿಸಲಿಲ್ಲ. ನಿಜ ಭಕ್ತಿಯ ಮಹಾಮನೆ ಕಟ್ಟಲಿಲ್ಲ. ಪದವಿಗಳು ಸ್ಥಿರವಲ್ಲ ಗಮನಾಗಮಕ್ಕೆ ಕರೆದುಕೊಂಡು ಹೋಗುವಂತವು. 

ಆದರೆ 12ನೇ ಶತಮಾನದ ಬಸವಾದಿ ಶಿವಶರಣರು ಮರ್ತ್ಯದಲ್ಲಿ ಬಂದು ಕಲ್ಯಾಣದಲ್ಲಿ, ಭಕ್ತಿಯ ಮಹಾಮನೆ ಕಟ್ಟಿದರೆ, ಮರ್ತ್ಯಲೋಕವೆಲ್ಲವೂ ಭಕ್ತಿಯ ಸಾಮ್ರಾಜ್ಯವಾಗಿತ್ತು. ಆ ಮನೆಗೆ ತೆಲೆಬಾಗಿ, ಕೈಮುಗಿದು ಹೋದವರೆಲ್ಲರೂ ನಿಜಲಿಂಗ ಪದವಿಯನ್ನು ಪಡೆದರು. ಗಮನಾಗಮದರಹಿತ ನಿಜದ ನಿಲುವಿನಲ್ಲಿ ನಿಜಮುಕ್ತಿಂ ಪಡೆದವರು ಶಿವಶರಣರು ಎಂದು ಶಿವಶರಣೆ ನೀಲಮ್ಮ ತಾಯಿಯವರು ಅರ್ಥಪೂರ್ಣವಾಗಿ ತಿಳಿಸಿದರು. 11ನೇ ಶತಮಾನದ ಪುರಾತನರ ಭಕ್ತಿಗೂ 12ನೇ ಶತಮಾನದ ಶರಣರ ಭಕ್ತಿಗೂ ಅನ್ಯ ಭಕ್ತಿ, ಅನನ್ಯ ಭಕ್ತಿಯ ದೃಷ್ಠಾಂತ ಕೊಟ್ಟು ವಿವರಿಸಿದರು. 

ಈಶ್ವರಿ ವಿಶ್ವವಿದ್ಯಾಲಯದ ಸಹೋದರಿ ಬಿ.ಕೆ.ಸುಮಿತ್ರಕ್ಕನವರು ಮಾತನಾಡುತ್ತಾ, ರಕ್ಷಾಬಂಧನವನ್ನು ನೂರಾರು ವರ್ಷಗಳೀಂದ ಆಚರಿಸುತ್ತಾ ಬಂದಿದ್ದು, ಪ್ರತಿಯೊಬ್ಬ ಸಹೋದರಿಗೆ ಸಹೋದರನ ಬೆಂಬಲ, ರಕ್ಷಣೆ ಬೇಕೇ ಬೇಕು. ಹಿಂದೆ ಮಹಾಭಾರತದಲ್ಲಿ ಶ್ರೀ ಕೃಷ್ಣನ ಬೆರಳಿಗೆ ಗಾಯವಾದಾಗ ದ್ರೌಪದಿಯು ತನ್ನ ಸೀರೆಯ ಸೆರಗನ್ನು ಹರಿದು ಶ್ರೀ ಕೃಷ್ಣನ ಬೆರಳಿಗೆ ಕಟ್ಟಿದ್ದಳು. ಮುಂದೊಂದು ದಿನ ದ್ರೌಪತಿಗೆ ಸಂಕಷ್ಟ ಬಂದಾಗ ಶ್ರೀ ಕೃಷ್ಣನನ್ನು ನೆನೆದಾಗ ಕೃಷ್ಣನ ಆಶಿರ್ವಾದದಿಂದ ಯಾವುದೇ ತೊಂದರೆ ದ್ರೌಪತಿಗೆ ಆಗಿಲ್ಲ ಎಂದು ಮಾತನಾಡಿದರ. ಈ ಸಂದಭದಲ್ಲಿ ಎಲ್ಲ ಭಕ್ತರಿಗೆ ರಾಖಿಯನ್ನು ಕಟ್ಟಿದರು. 

ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ನಡೆಸಿದರು. ತಬಲಾ ವಾದಕರಾಗಿ ಹೇಮೇಂದ್ರಕುಮಾರ ಹಿರೇಮಠ ನಡೆಸಿದರು. ಪ್ರಸಾದದ ಸೇವೆಯನ್ನು ಪ್ರಭುಗೌಡ ಕುಭೇರ ಗೌಡ ಚಿನ್ನಪ್ಪಗೌಡರು ಹಾಗೂ ಕುಟುಂಬದವರು ಸೇವೆಯನ್ನು ವಹಿಸಿದ್ದರು.  

ಈ ಸಂದರ್ಭದಲ್ಲಿ ಟ್ರಸ್ಟ್‌ ಕಮೀಟಿಯ ಸದಸ್ಯರಾದ ಕೊಟ್ರ​‍್ಪ ಕಮತರ, ಎಂ.ಎಂ. ಹಿರೇಮಠ ವಕೀಲರು, ಶಿವಣ್ಣ ಕತ್ತಿ, ಮುರಿಗೆಪ್ಪ ನಾಲವಾಡ, ಹಿರಿಯರಾದ ವಿರುಪಾಕ್ಷಪ್ಪ ಅಕ್ಕಿ, ಬಸವರಾಜ ಜಂತ್ಲಿ, ಶಿವಣ್ಣ ಇಟ್ನಳ್ಳಿ, ಪುರಾಣ ಪ್ರವಚನ ಸಮಿತಿ ಅಧ್ಯಕ್ಷರಾದ ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಗಂಗಾಧರ ಮೇಲಗಿರಿ, ಗಂಗಾಧರ ನಂದಿಕೋಲಮಠ, ಶ್ರಿಶೈಲಪ್ಪ ಪಟ್ಟಣಶೆಟ್ಟಿ, ಸುರೇಶ ಮಾಳವಾಡ, ಪ್ರಭು ಶೆಟ್ಟರ, ಸುಭಾಸ ಹವಳೆ, ವಿರುಪಾಕ್ಷಪ್ಪ ಅಂಗಡಿ, ಮಲ್ಲಿಕಾರ್ಜುನ ಹಿರೇಮಠ, ಶಂಕರ ನೀರಲಕೇರಿ, ಸುರೇಶ ನಿಲುಗಲ್ಲ, ಅಶೋಕ ತಮೃಳ್ಳಿ, ಬಸವರಾಜ ಮೊರಬದ, ಪಂಚಾಕ್ಷರ ಅಂಗಡಿ, ನವೀನ ನಾಲ್ವಾಡ, ಸುರೇಶ ಹೆಬಸೂರ, ಪ್ರಕಾಶ ಜಂತ್ಲಿ, ಸತ್ಸಂಗದ ಸದಸ್ಯರಾದ ಸುನಂದಾ ಜೋಬಾಳೆ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಜಯಶ್ರೀ ನಿಲೂಗಲ್, ಕಸ್ತೂರಕ್ಕ ಮಾನ್ವಿ, ಶರಣಮ್ಮ ಶಿರೂರ, ಸುಶೀಲಾ ನಿಲೂಗಲ್ಲ, ನೀಲಕ್ಕ ಕಗನಳ್ಳಿ,  ಅನಸಕ್ಕ ಮೇಲಗಿರಿ,  ಶೈಲಾ ಮಾನ್ವಿ ಮುತಾದವರು ಭಾಗವಹಿಸಿದ್ದರು.