ಶಂಕರ ಪಟೇದ ಆತ್ಮಹತ್ಯೆಗೆ ಶರಣು

ಶಂಕರ ಪಟೇದ ಆತ್ಮಹತ್ಯೆಗೆ ಶರಣು Shankar Patted committed suicide

ಸಂಕೇಶ್ವರ 08: ಪಟ್ಟಣದ ಬೀರೇಶ್ವರ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಎಲ್ ಐಸಿ ಎಜೆಂಟರಾಗಿದ್ದ ಶಂಕರ ಲಕ್ಷ್ಮಣ ಪಟೇದ (45) ಅವರು ಆತ್ಮಹತ್ಯೆ ಶರಣಾಗಿದ್ದಾರೆ.       ಶಂಕರ ಪಟೇದ ಅವರು ಕಳೆದ ಹಲವಾರು ವರ್ಷಗಳಿಂದ ಎಲ್ ಐಸಿ ಏಜೆಂಟ್ ಆಗಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದರು. 

ಆದರೆ ಮಂಗಳವಾರ ಬೆಳಗಿನ ಜಾವ ತಮ್ಮ ನಿವಾಸದ ಮೇಲ ಮಹಡಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಹಿಂದೆ ತಂದೆ, ತಾಯಿ, ಪತ್ನಿ, ಮೂವರು ಮಕ್ಕಳು ಹೀಗೆ ಕುಟುಂಬದ ಹೊಂದಿದ್ದರು.     ಈ ಕುರಿತು ತಮ್ಮ ಪತಿ ಸಾಲ ಮಾಡಿ ತೀರಿಸಲು ಆಗದೆ ಬೇಸರಗೊಂಡು ಜಿಗುಪ್ಸೆ ಯಿಂದ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಶಂಕರನ ಪತ್ನಿ ಸಂಕೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.