ಹೊಲಿಗೆ ತರಬೇತಿ: 17 ಯುವತಿಯರಿಗೆ ಹೊಲಿಗೆ ಪ್ರಮಾಣಪತ್ರ

Sewing training: Sewing certificates for 17 young women

ಮುಂಡಗೋಡ 13 : ಲೊಯೋಲ ವಿಕಾಸ ಕೇಂದ್ರದ ವತಿಯಿಂದ ನಡೆದ 3 ತಿಂಗಳ ಹೊಲಿಗೆ ತರಭೇತಿಯ ಸಮಾರೋಪ ಸಮಾರಂಭವನ್ನು ತಾಲೂಕಿನ ಅಜ್ಜಳ್ಳಿ ಗ್ರಾಮದ ಹನುಮಂತ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹೊಲಿಗೆ ತರಭೇತಿಯಿಂದ ನಿಮಗೆ ತುಂಬಾ ಪ್ರಯೋಜನವಾಗಿದೆ ನಿಮ್ಮ ಕೆಲಸವನ್ನು ಇಷ್ಟಪಟ್ಟು ಮಾಡಿ ಪ್ರತಿದಿನ ಶ್ರಮಪಟ್ಟು ಮಾಡಿದರೆ ಅವಕಾಶಗಳು ನಿಮನ್ನು ಹುಡುಕಿಕೊಂಡು ಬರುತ್ತವೆ ಇದನ್ನು ಇಲ್ಲಿಯೆ ಬಿಡದೆ ಮುಂದುವರೆಸಿಕೊಂಡು ಹೋಗಿರಿ ಎಂದು  ಜಯಪಾಲ್ ಹಾವೇರಿವರು ಹೇಳಿದರು.

ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರಾದ ವಂದನೀಯ ಫಾ.ಅನಿಲ್ ಡಿ’ಸೋಜ ಮಾತನಾಡುತ್ತ ನಿವೆಲ್ಲರೂ ಆಸಕ್ತಿಯಿಂದ ಊರಿನವರ ಸಹಕಾರದಿಂದ 3 ತಿಂಗಳು ಹೊಲಿಗೆ ತರಭೇತಿಯನ್ನು ಚೆನ್ನಾಗಿ ಮುಗಿಸಿದ್ದಿರಿ ಕಲಿಕೆ ನಿರಂತರವಾಗಿ ಇರಬೇಕು. ನಮ್ಮ ಜೀವನೋಪಾಯವನ್ನು ನಾವೇ ನಿರ್ವಹಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಬೆಳೆಯಬೇಕು. ಹೊಲಿಗೆ ತರಭೇತಿಯ ಜೊತೆಗೆ ಪ್ಯಾಶನ್ ಡಿಜೈನಿಂಗ್ ಕೊರ್ಸ್‌ 2 ವರ್ಷ ಮುಗಿಸಿದರೆ ನಿಮ್ಮದೆ ಆದ ಗಾರ್ಮೆಂಟ್ಸ್‌ ತೆರೆಯಬಹುದು ವಿವಿಧ ವಿನ್ಯಾಸದ ಬಟ್ಟೆಗಳನ್ನು ಹೊಲಿದು ಮಾರಾಟ ಮಳಿಗೆಯನ್ನು ಮಾಡಬಹುದು ಮಕ್ಕಳ ಶಾಲಾ ಸಮ ವಸ್ತ್ರ ಹೊಲಿಯಲು ಸಂಪರ್ಕಿಸುವದು ಬೇರೆ ಬೇರೆ ರೀತಿಯಲ್ಲಿ ನಿಮ್ಮ ಸ್ವಯಂ ಕಲಿಕೆಯನ್ನು ಹೆಚ್ಚಿಸಿಕೊಳ್ಳಿ ಕಲಿತ ವಿದ್ಯೆಯನ್ನು ಇಲ್ಲಿಯೆ ಬಿಡದೆ ಮುಂದುವರೆಸಿಕೊಂಡು ಹೋಗಿರಿ ಎಂದು ಹಾರೈಸಿದರು.  

 ತರಭೇತಿ ಮುಗಿಸಿದ ಯುವತಿಯರಾದ ರಾಧಾ ಹೂವಪ್ಪನವರ ಹಾಗೂ ತನುಜಾ ಗಂಟೆಮ್ಮನವರ ತಮ್ಮ ಕಲಿಕೆಯ ಅನುಭವವನ್ನು ಹಂಚಿಕೊಂಡರು. ತರಭೇತಿ ಮುಗಿಸಿದ 17 ಯುವತಿಯರಿಗೆ ಹೊಲಿಗೆ ಪ್ರಮಾಣಪತ್ರವನ್ನು ವೇದಿಕೆಯ ಮೇಲಿರುವ ಗಣ್ಯರು ವಿತರಿಸಿದರು. ಎಲ್,ವಿ,ಕೆ ಸಿಬ್ಬಂದಿಗಳಾದ ಮಂಗಳಾ ಮೋರೆ. ಸುರೇಶ, ಹಜರತ್ ಮುಲ್ಲಾ ಹಾಜರಿದ್ದರು. ಹೊಲಿಗೆ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿದರು. ಈ ಸಂಧರ್ಭದಲ್ಲಿ  ಸಾಲಗಾಂವ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಚಂದ್ರು ನಾರ್ವೇಕರ್, ಪಂಚಾಯತ್ ಸಿಬ್ಬಂದಿಗಳಾದ ರಾಜು ಅರಶಿಣಗೇರಿ, ಕಲ್ಪವೃಕ್ಷ ಕಟ್ಟಡ ಕಾರ್ಮಿಕರ ಯೂನಿಯನ್ ಕಾರ್ಯದರ್ಶಿಯಾದ ವಿಷ್ಣು ಪಿಲ್ಲೋಜಿ, ಯುವಕರಾದ ಚಂದ್ರು ಹೂವಪ್ಪನವರ. ಸಿೊಥಶಕ್ತಿ ಸಂಘದ ಸದಸ್ಯರಾದ ನಾಗಮ್ಮ ಭಜಂತ್ರಿ. ಸ್ವ ಸಹಾಯ ಸಂಘದ ಸದಸ್ಯರಾದ ್ಘ ಸೋಮನಕೊಪ್ಪ. ಹೊಲಿಗೆ ಕೇಂದ್ರದ ಶಿಕ್ಷಕಿಯಾದ ಗಂಗಮ್ಮ ಹನಕನಹಳ್ಳಿ ಹಾಗೂ ಉಪಸ್ಥಿತರಿದ್ದರು.