ಚಿರತೆ ಸೆರೆಹಿಡಯಲು ಬೋನಿನ ಅಳವಡಿಕೆ

ಚಿರತೆ ಸೆರೆಹಿಡಯಲು ಬೋನಿನ ಅಳವಡಿಕೆ Setting a trap to capture a leopard

ಜಮಖಂಡಿ 09: ತಾಲೂಕಿನ ಕೆ,ಡಿ,ಜಂಬಗಿ ಚಿರತೆಯೊಂದು ನಾಯಿಮರಿ ಮತ್ತು ಆಡು ತಿಂದು ಹಾಕಿದ್ದು. ಚಿರತೆಯ ಹೆಜ್ಜೆಯ ಗುರುತು ಎಂದು ಖಚಿತ ಪಡಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನಿನ ವ್ಯವಸ್ಥೆಯನ್ನು ಮಾಡಲಾಗಿದೆ.  

ಚಿರತೆ ಹೆಜ್ಜೆಗುರುತು ಪತ್ತೆಹಚ್ಚಿದ್ದು, ಗ್ರಾಮಸ್ಥರಲ್ಲಿ ಭೀತಿ ಮೂಡಿಸಿರುವ ಚಿರತೆಯ ಸೆರೆಗೆ ಆಯಕಟ್ಟಿನ ಸ್ಥಳದಲ್ಲಿ ಬೋನು ಅಳವಡಿಸಿ ಸೆರೆ ಹಿಡಿಯಲು ಸನ್ನದ್ಧವಾಗಿದೆ. ಚಿರತೆಯನ್ನು ಶೀಘ್ರದಲ್ಲಿಯೇ ಸೆರೆ ಹಿಡಿದು ಬೇರೆಡೆ ಸಾಗಿಸಲಾಗುವುದು. ಗ್ರಾಮಸ್ಥರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ತೋಟದ ವಸ್ತಿಯಲ್ಲಿ ಕಾಣಿಸಿಕೊಂಡ ಚಿರತೆಯನ್ನು ಹಿಡಿಯಲು ಬೋನು ಅಳವಡಿಸಿದ್ದು, ಬೋನಿನಲ್ಲಿ ಒಂದು ನಾಯಿಯನ್ನು ಕೂಡಿ ಹಾಕಿರುವುದರಿಂದ ನಾಯಿ ತಿನ್ನಲು ಸ್ಥಳಕ್ಕೆ ಚಿರತೆ ಬರುತ್ತದೆ. ಆವಾಗ ಚಿರತೆಯನ್ನು ಹಿಡೆಯಲು ಸಾಧ್ಯ ಎಂದು ವಲಯ ಅರಣ್ಯ ಇಲಾಖೆ ಅಧಿಕಾರಿ ಕಿರಣ ದಾಸರೆಡ್ಡಿ ತಿಳಿಸಿದರು.