ಸಮರ್ಪಣಾ ಭಾವದಿಂದ ರೋಗಿಗಳ ಸೇವೆ ಸಲ್ಲಿಸಿ: ಡಾ.ರಾಘವೇಂದ್ರ ಮಾಳೊಜಿ
Serve patients with dedication: Dr. Raghavendra Maloji
ಬೀಳಗಿ 01: ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು. ನಮಗೆ ಹಣ ಮುಖ್ಯ ಆಗಬಾರದು ಸೇವೆ ಮುಖ್ಯ ಆಗಬೇಕು ಎಂದು ಡಾ. ರಾಘವೇಂದ್ರ ಮಾಳೊಜಿ ಹೇಳಿದರು.
ಸ್ಥಳೀಯ ಮಂದಾರ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಏರಿ್ಡಸಿದ ವೈದ್ಯರ ದಿನದ ಕಾರ್ಯಕ್ರಮದಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿ ವೈದ್ಯರಾಗುವವರು ಮುಖ್ಯವಾಗಿ ಸೇವಾ ಮನೋಭಾವ ರೂಡಿಸಿಕೊಳ್ಳಬೇಕು. ಸಮರ್ಣ ಭಾವ ಇರಬೇಕು. ನಮ್ಮನ್ನು ನಂಬಿ ಬರುವ ರೋಗಿಗಳು ನಾವಾಡುವ ಒಳ್ಳೆಯ ಮಾತುಗಳಿಂದಲೇ ಅರ್ಧ ಗುಣಮುಖರಾಗಬೇಕು ಎಂದರು.
ವೈದ್ಯೆ ಅಶ್ವಿನಿ ಮಾಳೊಜಿ ಮಾತನಾಡಿ ಮಂದಾರ ಪಬ್ಲಿಕ್ ಶಾಲೆಯಲ್ಲಿ ಅಣುಕು ಪ್ರದರ್ಶನದ ಮೂಲಕ ವೈದ್ಯ ಲೋಕವನ್ನು ಸೃಷ್ಟಿಸಿದ್ದು ನಿಜಕ್ಕೂ ಶ್ಲ್ಯಾಘನೀಯವಾದ ಕಾರ್ಯ ಎಂದ ಅವರು ಜಂಕ್ ಫುಡ್ ಮತ್ತು ಮೊಬೈಲ್ ನಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ ಎಸ್ ಸೋಮನಕಟ್ಟಿ ಮಾತನಾಡಿ ವೈದ್ಯರು ಕಣ್ಣಿಗೆ ಕಾಣುವ ನಿಜವಾದ ದೇವರು. ಅವರ ನಿಸ್ವಾರ್ಥ ಸೇವೆ ಅಮೋಘವಾದದ್ದು. ವೈದ್ಯರ ದಿನವನ್ನು ಅಣುಕ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಣ್ಣ ಪ್ರಯತ್ನ ಈ ಸಂಸ್ಥೆಯದ್ದಾಗಿದೆ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯನಿ ಸುಮಾ ಸೋಮನಕಟ್ಟಿ ಸ್ವಾಗತಿಸಿದರು. ಶಿಕ್ಷಕಿಯರಾದ ವಿಜಯಲಕ್ಷ್ಮಿ ಗಾಣಿಗೇರ ನಿರೂಪಿಸಿದರು, ಅಂಕಿತಾ ಹಲಗಣಿ ವಂದಿಸಿದರು. ಶಿಕ್ಷಕಿ ರೇಣುಕಾ ಬೊರ್ಜಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಬೀಳಗಿಯ ಮಂದಾರ ಪಬ್ಲಿಕ್ ಶಾಲೆಯಲ್ಲಿ ಏರಿ್ಡಸಿದ ವೈದ್ಯರ ದಿನ ಸಮಾರಂಭದಲ್ಲಿ ಡಾ. ರಾಘವೇಂದ್ರ ಮಾಳೊಜಿ ಹಾಗೂ ಡಾ. ಅಶ್ವಿನಿ ಮಾಳೊಜಿ ದಂಪತಿಗಳನ್ನು ಗೌರವಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 