ಭಾರತೀಯ ಸೇನೆಗೆ ಆಯ್ಕೆ: ಮದಗಾರ ಕುಟುಂಬದಿಂದ ಸನ್ಮಾನ

ಭಾರತೀಯ ಸೇನೆಗೆ ಆಯ್ಕೆ: ಮದಗಾರ ಕುಟುಂಬದಿಂದ ಸನ್ಮಾನ Selection for Indian Army: Honored by the Madagara family

ಗಜೇಂದ್ರಗಡ 03: ಭಾರತಾಂಬೆ ಸೇವೆ ಮಾಡಲು ನಮ್ಮ ತನು, ಮನ, ಧನ ಅರ​‍್ಿಸಿಕೊಳ್ಳುವುದು ಅವಶ್ಯಕವೆಂದು ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ ಮಾಸುಮಲಿ ಮದಗಾರ ಹೇಳಿದರು. 

ಸ್ಥಳೀಯ ಕಟ್ಟಿಬಸವೇಶ್ವರ ರಂಗಮಂದಿರ ನಿವಾಸಿ ಸಂಗಪ್ಪ ವಡಗೇರಿ ಇವರ ಮೊಮ್ಮಗ ಆಕಾಶ ಕವಡಿಮಟ್ಟಿ ಭಾರತೀಯ ಸೇನೆಗೆ ನೇಮಕಗೊಂಡಿದ್ದರಿಂದ  ಅಂಜುಮನ್ ಇಸ್ಲಾಂ ಕಮೀಟಿಯ ಮಾಜಿ ಕಾರ್ಯದರ್ಶಿ ಮಾಸುಮಲಿ ಮದಗಾರ ಅವರ ಕುಟುಂಬ ವರ್ಗದವರು ಸನ್ಮಾನಿಸಿ ಸತ್ಕರಿಸಿದರು. 

ಭಾರತೀಯ ಸೇನೆಗೆ ಸೇರಲು ಅನೇಕ ಯುವಕರು ವರ್ಷಾನುಗಟ್ಟಲೆ  ಸಾಕಷ್ಟು ಕಷ್ಟಪಡುತ್ತಾರೆ.  ಭಾರತಾಂಬೆಯ ಸೇವೆ ಮಾಡಲು ಪೂರ್ವಜರ ಆಶಿರ್ವಾದ ಹಾಗೂ ಶ್ರಮದಿಂದ ಗುರಿಯನ್ನು ತಲುಪಲು ತುಂಬಾ ಸಹಕಾರಿಯಾಗಿದೆ. ಯುವಕರು  ದೈಹಿಕವಾಗಿ ಮಾನಸಿಕವಾಗಿ ಸಿದ್ಧರಾಗಿ ಸದಾ ತಾಯ್ನಾಡಿನ ಸೇವೆ ಮಾಡಲು ಮುಂದಾಗಬೇಕು ಆಕಾಶ ಕವಡಿಮಟ್ಟಿ ಎಂದರು. 

ಈ ಸಂದರ್ಭದಲ್ಲಿವ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ,  ಸೇರಿದಂತೆ ಮದಗಾರ ಕುಟುಂಬದ ಸದಸ್ಯರು ಇದ್ದರು.