ನವೋದಯ ಹಾಗೂ ಸೈನಿಕ ಶಾಲೆಗೆ ಆಯ್ಕೆ

ನವೋದಯ ಹಾಗೂ ಸೈನಿಕ ಶಾಲೆಗೆ ಆಯ್ಕೆ  Selected for Navodaya and Sainik schools

ಲೋಕದರ್ಶನ ವರದಿ 

ಧಾರವಾಡ 23: ತಾಲೂಕಿನ ಅಮ್ಮಿನಬಾವಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಅರ್ಚಿತ್ ಅಭಯಕುಮಾರ ದೇಸಾಯಿ ಕೇಂದ್ರ ಸರಕಾರದ ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಶೇ.98.75 ಅಂಕ ಸಂಪಾದಿಸಿ ಆಯ್ಕೆಯಾಗಿದ್ದಾನೆ. ಜೊತೆಗೆ ಪ್ರಸಕ್ತ ವರ್ಷದ ಅಖಿಲ ಭಾರತ ಸೈನಿಕ ಶಾಲೆಯಗಳ ಪ್ರವೇಶ ಪರೀಕ್ಷೆಯಲ್ಲಿ ಶೇ.75.66 (ಒಟ್ಟು : 227) ಅಂಕ ಸಂಪಾದಿಸಿ ಪ್ರವೇಶಾರ್ಹತೆ ಪಡೆದಿದ್ದಾನೆ.  

ಅಮ್ಮಿನಬಾವಿ ದಿಗಂಬರ ಜೈನ್ ಸಮಾಜ ಟ್ರಸ್ಟ್‌ ಅಧ್ಯಕ್ಷ ಟಿ.ಎಂ.ದೇಸಾಯಿ ವಿದ್ಯಾರ್ಥಿಯನ್ನು ಅಭಿನಂದಿಸಿ ಗೌರವಿಸಿದರು.