ವಾಟ್ಸಪ್ ಸಂದೇಶ ನೋಡಿ ಶಾಲೆ ಉಳಿವಿಗೆ ಆಗಮಿಸಿದ ಸಚಿವ ಎಸ್. ಸುರೇಶ್ ಕುಮಾರ್
ಹಾಸನ, ಮೇ 23,ವಾಟ್ಸಪ್ ಸಂದೇಶ ನೋಡಿ ಶಾಲೆ ಉಳಿವಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶತಮಾನದ ಇತಿಹಾಸ ಇರುವ ಸಕಲೇಶಪುರ ತಾಲ್ಲೂಕಿನ ದೇವಲಕೆರೆ ಶಾಲೆಗೆ ಇಂದು ಭೇಟಿ ನೀಡಿದರು.ಗ್ರಾಮಸ್ಥರು ಹಾಗೂ ದಾನ ನೀಡಿದ ಕುಟುಂಬದೊಂದಿಗೆ ಸಭೆ ನಡೆಸಿದ ಸಚಿವರು, ಶಾಲೆಯ ಹಿತದೃಷ್ಟಿಯಿಂದ ಶೀಘ್ರವೇ ನ್ಯಾಯ ಸಮ್ಮತ ತೀರ್ಮಾನ ಪ್ರಕಟಿಸುವುದಾಗಿ ಭರವಸೆ ನೀಡಿದರು.ಶಾಲಾ ಕಟ್ಟಡ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಫೇಸ್ ಬುಕ್ ಅಭಿಯಾನವನ್ನು ಇತ್ತೀಚೆಗೆ ಸಚಿವರು ಫೇಸ್ಬುಕ್ ವೀಡಿಯೋ ನೋಡಿದ್ದರು.
1911 ರಲ್ಲಿ ಗ್ರಾಮದ ಶಿವೇಗೌಡ ಅವರು ದಾನಕೊಟ್ಟಿದ್ದ ಸ್ಥಳದಲ್ಲಿ ಈ ಶಾಲೆ ನಿರ್ಮಿಸಲಾಗಿದ್ದು, 2008 ರಲ್ಲಿ ಹೊಸ ಕಟ್ಟಡ ಕಟ್ಟಿ ಶಾಲೆ ಸ್ಥಳಾಂತರ ಮಾಡಲಾಗಿತ್ತು. ಸ್ಥಳಾಂತರ ಬಳಿಕ ಈ ಕಟ್ಟಡ ಪಾಳುಬಿದ್ದಿತ್ತು. ಕಟ್ಟಡ ದುರಸ್ತಿ ಮಾಡಲು ಹಳೆ ವಿದ್ಯಾರ್ಥಿಗಳು ಮುಂದಾಗಿದ್ದರೂ ಈ ವೇಳೆ ಜಾಗ ದಾನ ಕೊಟ್ಟ ಶಿವೇಗೌಡರ ಕುಟುಂಬಸ್ಥರು ಅದಕ್ಕೆ ಅಡ್ಡಿ ಪಡಿಸಿದ್ದರು. ದುರಸ್ತಿಗಾಗಿ ಮೇಲ್ಛಾವಣಿ ತೆಗೆದ ಬಳಿಕ ಕುಟುಂಬಸ್ಥರು ಅಡ್ಡಿ ಪಡಿಸಿದ್ದರು. ಆಗ ಶಾಲೆಯ ದುರಸ್ತಿಗೆ ಅವಕಾಶ ನೀಡಿ ಎಂದು ಗ್ರಾಮಸ್ಥರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 