ಪಕ್ಷಿಗಳನ್ನು ರಕ್ಷಿಸಿ ಚಟುವಟಿಕೆ

ಪಕ್ಷಿಗಳನ್ನು ರಕ್ಷಿಸಿ ಚಟುವಟಿಕೆ  Save the birds activity

ಲೋಕದರ್ಶನ ವರದಿ 

ಗದಗ 25: ನಗರದ ಪ್ರತಿಷ್ಠತ ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್‌. ಎಸ್‌. ಎಸ್‌. ಘಟಕದ ವತಿಯಿಂದ ಪಕ್ಷಿಗಳನ್ನು ರಕ್ಷಿಸಿ ಚಟುವಟಿಕೆಯನ್ನು ಆಯೋಜಿಸಲಾಗಿತ್ತು.  

ಎನ್‌. ಎಸ್‌. ಎಸ್‌. ಸ್ವಯಂಸೇವಕರು ಈ ಬೇಸಿಗೆ ದಿನಗಳಲ್ಲಿ ಪಕ್ಷಿಗಳಿಗೆ ಅವಶ್ಯಕವಾಗಿರುವ ಕಾಳುಗಳು ಮತ್ತು ನೀರನ್ನು ಹಾಕಲು ವ್ಯವಸ್ಥೆ ಮಾಡಲಾಯಿತು ಮತ್ತು ಪ್ರತಿದಿನ ಅವುಗಳನ್ನು ಗಮನಿಸಲು ಎನ್‌. ಎಸ್‌. ಎಸ್‌. ಸ್ವಯಂಸೇವಕರಿಗೆ ಸೂಚಿಸಲಾಯಿತು.       

ಈ ಚಟುವಟಿಕೆಯಲ್ಲಿ ಮಹಾವಿದ್ಯಾಲಯದ ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿ ಪ್ರೋ. ವಾಗೀಶ ಗು.ರೇಶ್ಮಿ, ಎನ್‌. ಎಸ್‌. ಎಸ್‌. ಘಟಕದ ಸಹ - ಕಾರ್ಯಕ್ರಮಾಧಿಕಾರಿ ಪ್ರೋ. ವೀರಣ್ಣ ಬಡಿಗೇರ್ ಎನ್‌. ಎಸ್‌. ಎಸ್‌. ಘಟಕದ ನಾಯಕಿ ನೀಲಮ್ಮ ಸೀತಾರಳ್ಳಿ, ಎನ್‌. ಎಸ್‌. ಎಸ್‌. ತಂಡ 10ರ ನಾಯಕ ಕುಮಾರ ಸೋಮಶೇಖರ ಕುರಿ, ಎನ್‌. ಎಸ್‌. ಎಸ್‌. ಘಟಕದ ಎಲ್ಲ ಸ್ವಯಂಸೇವಕರು ಹಾಗೂ ವಿವಿಧ ತಂಡಗಳ ನಾಯಕ - ನಾಯಕಿಯರು ಉಪಸ್ಥಿತರಿದ್ದರು