ಸರಕಾರಿ ಶಾಲೆ ಉಳಿಸಿ ಬೆಳೆಸಿ: ಬಾಲಚಂದ್ರ ಜಾರಕಿಹೋಳಿ
Save and develop government schools: Balachandra Jarkiholi
ಲೋಕದರ್ಶನ ವರದಿ
ಗುರ್ಲಾಪೂರ 09: ಸ್ಥಳೀಯ ಪಿಎಮ್ ಶಾಸಕರ ಶಾಲೆಗೆ ಬಾಲಚಂದ್ರ ಜಾರಕಿಹೊಳಿಯವರು ಸನ್ 2026-27 ನೇಯ ಸಾಲಿನ ದಾಖಲಾತಿ ಅಂದೋಲನಕ್ಕೆ ಚಾಲನೆ ನೀಡಿ, ಸರಕಾರಿ ಶಾಲೆ ಉಳಿಸಿ ಬೆಳೆಸಿ ಎಂದು ಕರೆ ನೀಡಿದರು.
ಬುಧವಾರ ದಿ. 8 ಎಪ್ರೀಲ್ 2026 ರಂದು ಗುರ್ಲಾಪೂರ ಪಿಎಮ್ ಶಾಸಕರ ಶಾಲೆಗೆ ಭೇಟಿ ನೀಡಿದರು. ನಂತರ ಪದವಿದರ ಮುಖ್ಯೋಪಾಧ್ಯಾಯರಾದ, ಗೋಪಾಲ ಪತ್ತಾರ, ಶಾಲಾ ಮುಖ್ಯೋಪಾಧ್ಯಾಯರಾದ ಬಸವರಾಜ ಸಸಾಲಟ್ಟಿಯವರೊಂದಿಗೆ ಮಾತನಾಡುತ್ತಾ. ಶಾಲೆಯ ಮಕ್ಕಳಿಗೆ ಯಾವುದೇ ತರಹನಾದ ಅನಾನುಕೂಲತೆ ಆಗಬಾರದು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಮಾದರಿ ಶಾಲೆಯನ್ನಾಗಿ ಮಾಡಿರಿ ಎಂದರು.
ಶಾಲೆಯ ಕಾರ್ಯಕ್ರಮದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷರಾದ ಎಲ್ ಪಿ ನೇಮಗೌಡರ, ಸಿದ್ದು ಗಡ್ಡೇಕಾರ, ಪ್ರಕಾಶ ಮುಗಳಖೋಡ, ಮರೆಪ್ಪಗೋಳ ಲಕ್ಷ್ಮಣಗೌರಾಣಿ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಡ್ವಿ ನರಸನ್ನವರ, ಎಲ್ ಆರ್ಸಾಲಿಮಠ, ಸುನೀಲ ತುಪ್ಪದ, ಶಿವಾನಂದ ಹಳ್ಳೂರ, ಮಹಾದೆವ ಮರಾಠೆ, ಪಿ,ಕೆ,ಪಿ,ಎಸ್ ಸೋಸಾಯಿಟಿಯ ಅಧ್ಯಕ್ಷರಾದ ಎಸ್.ಜಿ.ಹಂಚಿನಾಳ ಹಾಜರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಬಸವರಾಜ ಸಸಾಲಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 