ಸಿದ್ದಿ ಹೂಮ್ಯಾನಿಟಿ ಫೌಂಡೇಶನ್‌ಗೆ ಸಂಗೋಳ್ಳಿ ರಾಯಣ್ಣ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ

ಕಾಗವಾಡ 01: ತಾಲೂಕಿನ ಜುಗೂಳ ಗ್ರಾಮದ ಅನ್ನ-ಶಿಕ್ಷಣ-ಆರೋಗ್ಯ ಸೇವೆಯ ಧೇಯದೊಂದಿಗೆ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಿ ಹೂಮ್ಯಾನಿಟಿ ಫೌಂಡೇಶನ್‌ಗೆ ಬೆಳಗಾವಿಯ ಅಣ್ಣಪೂರ್ಣೆಶ್ವರಿ ಹೂಮ್ಯಾನಿಟಿ ಫೌಂಡೇಶನ್ ಇವರು ಕೊಡಮಾಡುವ ರಾಜ್ಯ ಮಟ್ಟದ ಸಂಗೋಳ್ಳಿ ರಾಯಣ್ಣ ಪ್ರಶಸ್ತಿ ಲಭಿಸಿದೆ. 

ರವಿವಾರ ದಿ. 29 ರಂದು ಬೆಳಗಾವಿಯ ಸಾಯಿ ಸಂಗಮ ಇಂಟರನ್ಯಾಶನಲ್ ಹೋಟೇಲ್‌ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಅನೇಕರನ್ನು ಗುರುತಿಸಿ, ಪ್ರಶಸ್ತಿ ಪ್ರಧಾನ ಮಾಡಿ, ಸನ್ಮಾನಿಸಲಾಯಿತು. ವೀರರಾಣಿ ಕಿತ್ತೂರ ಚನ್ನಮ್ಮಾ ಪ್ರಶಸ್ತಿಯನ್ನು ಮಾಧುರಿ ಜಾಧವ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಮಾಧುರಿ ಜಾಧವ ಇವರಿಗೆ ನೀಡಿದರೇ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಪ್ರಶಸ್ತಿಯನ್ನು ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್‌ನ ಅಧ್ಯಕ್ಷರಾದ ಬಾಹುಬಲಿ ಉಪಾಧ್ಯೆ ಇವರಿಗೆ ನೀಡಿ, ಸನ್ಮಾನಿಸಿ, ಗೌರವಿಸಲಾಯಿತು.  

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುರಗೋಡದ ಶ್ರೀ ಮಹಾಂತ ದುರದುಂಡೇಶ್ವರದ ಮಠದ ಮನಿಪ್ರ ನೀಲಕಂಠ ಮಹಾಸ್ವಾಮಿಗಳು ವಹಿಸಿದ್ದರು.ಈ ಸಮಯದಲ್ಲಿ ಬಾಹುಬಲಿ ಉಪಾಧ್ಯೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಅನ್ನ-ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಸಿದ್ದಿ ಹೂಮ್ಯಾನಿಟಿ ಫೌಂಡೇಶನ್‌ನ ಸಾಮಾಜಿಕ ಕಾರ್ಯವನ್ನು ಮೆಚ್ಚಿ ನಮಗೆ ಪ್ರಶಸ್ತಿ ನೀಡಿರುವುದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಫೌಂಡೇಶನ್ ಎಲ್ಲ ಸದಸ್ಯರ ಸಹಕಾರದಿಂದಾಗಿ ಈ ಪ್ರಶಸ್ತಿ ಬಂದಿದ್ದು, ಇದನ್ನು ಅವರೆಲ್ಲರ ಸೇವೆಗೆ ಸಮರ​‍್ಿಸುತ್ತೇನೆ ಎಂದರು. 

ಈ ವೇಳೆ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ಹೊರಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಕರ್ನಾಟಕ ದಲಿತ ಪ್ಯಾಂಥರ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ರಮೇಶ ಹರಿಜನ, ಮಾಧುರಿ ಜಾಧವ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಮಾಧುರಿ ಜಾಧವ, ಸಿದ್ದಿ ಹೂಮ್ಯಾನಿಟಿ ಫೌಂಡೇಶನ್‌ನ ಅಧ್ಯಕ್ಷ ಬಾಹುಬಲಿ ಉಪಾಧ್ಯೆ, ಅಣ್ಣಪೂರ್ಣೆಶ್ವರಿ ಹೂಮ್ಯಾನಿಟಿ ಫೌಂಡೇಶನ್‌ನ ಅಧ್ಯಕ್ಷ ಮಹಾಂತೇಶ ಕಡಲಗಿ ಮತ್ತು ಎಲ್ಲ ಸದಸ್ಯರು ಉಪಸ್ಥಿತರಿದ್ದರು.