ಸಂಗಮೇಶ ಪಾಟೀಲ ಅವರಿಗೆ ಪಿಎಚ್‌.ಡಿ ಪ್ರದಾನ

ಸಂಗಮೇಶ ಪಾಟೀಲ ಅವರಿಗೆ ಪಿಎಚ್‌.ಡಿ ಪ್ರದಾನ   Sangamesh Patil awarded Ph.D.

ಬೆಳಗಾವಿ  26: ಸವದತ್ತಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ಸಂಗಮೇಶ ಈರನಗೌಡ ಪಾಟೀಲ ಅವರಿಗೆ ಇತ್ತೀಚೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿ ನೀಡಿದೆ. 

ಸಂಗಮೇಶ ಪಾಟೀಲ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರೊ. ಕಮಲಾಕ್ಷಿ ತಡಸದ ಅವರ ಮಾರ್ಗದರ್ಶನದಲ್ಲಿ ‘ಸಿವಿಲ್ ಸೊಸೈಟಿ  ಆ್ಯಂಡ್ ಗವರ್ನನ್ಸ್‌: ಎನ್ ಅನಲ್ಯಾಟಿಕ್ ಸ್ಟಡಿ ಇನ್ ಕರ್ನಾಟಕ ಸ್ಟೇಟ್ ‘ ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು.  ಕರ್ನಾಟಕ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ನಾಗರಿಕ ಸಮಾಜದ ಮಹತ್ವ ಮತ್ತು ಆಡಳಿತದಲ್ಲಿ  ನಾಗರಿಕರ ಪಾತ್ರದ ಕುರಿತಾಗಿ ಸವಿವರವಾಗಿ ಸಂಶೋಧನೆಯಲ್ಲಿ ಸಂಗಮೇಶ ಪಾಟೀಲ ಅವರು ವಿಶ್ಲೇಷಿಸಿದ್ದಾರೆ.