ಎನ್ಕೌಂಟರ್: ಹೈದರಾಬಾದ್ ಪೊಲೀಸರ ಕ್ರಮಕ್ಕೆೆ ಸೈನಾ ನೆಹ್ವಾಲ್ ಸಲ್ಯೂಟ್
Saina Nehwal
ನವದೆಹಲಿ, ಡಿ 6- ಪಶುವೈದ್ಯ ಮೇಲೆ ಅತ್ಯಚಾರವೆಸಗಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸರನ್ನು ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಶ್ಲಾಘಿಸಿದರು.
‘ಹೈದರಾಬಾದ್ ಪೊಲೀಸರಿಂದ ಅದ್ಭುತ ಕಾರ್ಯ.. ನಾವು ನಿಮಗೆ ನಮಸ್ಕರಿಸುತ್ತೇವೆ,’’ ಎಂದು ಸೈನಾ ಟ್ವೀಟ್ ಮಾಡಿದ್ದಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲನೇ ಟಿ-20 ಪಂದ್ಯದಲ್ಲಿ ಇಂದು ಮುಖಾಮುಖಿಯಾಗುತ್ತಿವೆ.
ಟಿ-20 ಪಂದ್ಯ ಆರಂಭವಾಗುವುದಕ್ಕೂ ಒಂದು ವಾರದ ಹಿಂದೆಯೇ ಹೈದರಾಬಾದ್ ನಗರದಲ್ಲಿ ಈ ಭಯಾನಕ ಘಟನೆ ನಡೆದಿತ್ತು. ಆರೋಪಿಗಳನ್ನು ಬಂಧಿಸಿದ್ದ ಹೈದರಾಬಾದ್ ಪೊಲೀಸರು, ಇಷ್ಟು ದಿನ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಎಲ್ಲ ತಪ್ಪುು ಒಪ್ಪಿಿಕೊಂಡಿದ್ದರು.
ಇಂದು ಸ್ಥಳ ಪರಿಶೀಲನೆ ಮಾಡಲು ಪೊಲೀಸರು ಆರೋಪಿಗಳೊಂದಿಗೆ ಘಟನೆ ನಡೆದಿದ್ದ ಶಾದ್ನಗರ್ ಕ್ಕೆೆ ಆಗಮಿಸಿದ್ದರು. ಈ ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸರು ಆ ನಾಲ್ವರು ಆರೋಪಿಗಳ ಮೇಲೆ ಗುಂಡು ಹಾರಿಸಿ ಎನ್ಕೌಂಟರ್ ಮಾಡಲಾಗಿದೆ.
ಹೈದರಾಬಾದ್ ಪೊಲೀಸರ ಕ್ರಮದ ಬಗ್ಗೆೆ ಸಾಮಾಜಿಕ ಜಾಲಾತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎನ್ಕೌಂಟರ್ ಕ್ರಮವನ್ನು ಕೆಲವರು ಸಮರ್ಥಿಸಿಕೊಂಡರೆ, ಇನ್ನು, ಕೆಲವರು ದೇಶಾದ್ಯಂತ ನಡೆದಿರುವ ಅತ್ಯಚಾರ ಪ್ರಕರಣಗಳ ಆರೋಪಿಗಳು ಇದೇ ರೀತಿ ಶಿಕ್ಷೆೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದು ಗುಂಪು, ಆರೋಪಿಗಳ ಸ್ಥಾನದಲ್ಲಿ ಶ್ರೀಮಂತರಿದ್ದರೆ ಎನ್ಕೌಂಟರ್ ಮಾಡುತ್ತಿರಲಿಲ್ಲ. ಹೈದರಾಬಾದ್ ಪೊಲೀಸರು ಮಾಡಿದ ರೀತಿಯೇ ಅತ್ಯಚಾರ ಪ್ರಕರಣಗಳ ಆರೋಪ ಸ್ಥಾನದಲ್ಲಿರುವ ಎಲ್ಲರಿಗೂ ಇದೇ ರೀತಿ ಈ ಹಿಂದೆ ಎನ್ಕೌಂಟರ್ ಏಕೆ ಮಾಡಲಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 