ವಿಜಯಪುರ 10: ನಗರದ ಲಿಂಗದ ಗುಡಿ ರಸ್ತೆಯಲ್ಲಿರುವ ಸಂಘದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಮಹಾವೀರ ಪಾರೇಖ ಮುಂದಿನ ಎರಡು ವರ್ಷದ ಅವದಿಗೆ ಸಂಪದ ಪದಾಧಿಕಾರಿಗಳ ಆಯ್ಕೆ ಕುರಿತು ಸಭೆಗೆ ಪ್ರಸ್ತಾಪಿಸುವ ಮೂಲಕ ಸದಸ್ಯರ ಅನುಮತಿ ಪಡೆದು ಆಯ್ಕೆ ಪ್ರಕ್ರಿಯೆ ನೆರವೇರಿಸಿ ಸಂಘದ ಜಂಟಿ ಕಾರ್ಯದರ್ಶಿಯಾಗಿ ಸಚಿನ ಬೊಂಬಲೆ ಅವರನ್ನು ಆಯ್ಕೆ ಮಾಡಲಾಯಿತು,
ಇದೇ ಸಂದರ್ಭದಲ್ಲಿ ಆಯ್ಕೆಗೊಂಡ ನೂತನ ಜಂಟಿ ಕಾರ್ಯದರ್ಶಿಯಾದ ಸಚಿನ ಬೊಂಬಲೆ ಮಾತನಾಡಿ, ಮುಂಬರುವ ದಿನಗಳಲ್ಲಿ ಕ್ರೆಡೈ ಸಂಸ್ಥೆ ಸಮಾಜಮುಖಿ ಕಾರ್ಯ ನಿರ್ವಹಿಸಲು ಹಗಲಿರುಳು ಶ್ರಮಿಸುವೆ. ಎಲ್ಲಾ ಪದಾಧಿಕಾರಿಗಳೊಂದಿಗೆ ಚರ್ಚೆಸಿ ಜಿಲ್ಲೆಯ ಭೂ ಅಭಿವೃದ್ಧಿಗಾಗಿ ಯೋಜನಾ ಬದ್ಧ ಹಾಗೂ ಸಮಗ್ರ ಬೆಳವಣಿಗೆ ನಿಟ್ಟಿನಲ್ಲಿ ಶ್ರಮಿಸಲಾಗುವುದು. ನಗರದ ಸವಾಂರ್ಗೀಣ ಅಭಿವೃದ್ಧಿ ಮತ್ತು ಗುಂಟಾ ನಿವೇಶನಗಳ ಬೆಳವಣಿಗೆ ನಿಲ್ಲಿಸುವ ದೃಷ್ಟಿಯಿಂದ ಕ್ರಿಡೈ ಬಲ ಪಡಿಸುವುದಾಗಿ ತಿಳಿಸಿದರು. ಆಯ್ಕೆಮಾಡಿದ ಸರ್ವ ಸದಸ್ಯರಿಗೆ ಧನ್ಯವಾದ ಅರ್ಿಸಿದರು.
ಅನುಪಮ ರುಣವಾಲ, ರಾಜೇಂದ್ರ ರುಣವಾಲ, ಟಪಾಲ ಇಂಜಿನಿಯರ್, ಅನೀಲ ಅವಳೆ, ಇರ್ಫಾನ್ ಪಠಾಣ ಜಂಟಿಕಾರ್ಯದರ್ಶಿಯಾಗಿ ಆಯ್ಕೆಗೊಂಡ ಹಿನ್ನೆಲೆ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.