ಸಿಂಗಾಪುರದ ಸಿಂಡಾ ಸಂಘದಿಂದ ಸಬರದ್‌ಗೆ ಸನ್ಮಾನ

ಸಿಂಗಾಪುರದ ಸಿಂಡಾ ಸಂಘದಿಂದ ಸಬರದ್‌ಗೆ ಸನ್ಮಾನ Sabarad honored by Singapore's Sinda Sangha

ಮಹಾಲಿಂಗಪುರ 21: ಸಿಂಗಾಪುರದಲ್ಲಿ ಸಶಸ್ತ್ರ ಸೈನಿಕ ತರಬೇತಿ ಪಡೆಯುತ್ತಿರುವ, ಮಹಾಲಿಂಗಪುರ ಪಟ್ಟಣದ ಮಶಾಲ ಸಬರದ ರಾಷ್ಟ್ರಮಟ್ಟದ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಸಿಂಗಾಪುರದ ಸಿಂಡಾ ಸಂಘದಿಂದ ಗೌರವ ಸನ್ಮಾನ ಸ್ವೀಕರಿಸಿದ್ದಾರೆ. ಇತ್ತೀಚೆಗೆ ಸಿಂಗಾಪುರ ಭಾರತೀಯ ಅಭಿವೃದ್ಧಿ ಸಂಘ (ಸಿಂಡಾ) ಏರಿ​‍್ಡಸಿದ್ದ ಸಿಂಡಾ ಅಕಾಡೆಮಿಕ್ ಅಕ್ಸೆಲೆನ್ಸ್‌ ಪ್ರಶಸ್ತಿ ಕಾರ್ಯಕ್ರಮದಲ್ಲಿ ಸಿಂಗಾಪುರ ಸಾಂಸ್ಕೃತಿಕ ಸಚಿವ ದಿನೇಶ ವಾಸು ದಾಸ ಈ ವಿಶೇಷ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಧ್ಯಾರ್ಥಿ ಮಶಾಲ ಅವರನ್ನು ಗೌರವಿಸಿದರು. ಖ್ಯಾತ ಅಂಕಣಕಾರರಾದ ಮಲ್ಲಿಕಾರ್ಜುನ ಹೆಗ್ಗಳಗಿ, ತಾತ ಜಿ.ಡಿ.ಸಗರಿ, ಪಾಲಕರಾದ ಮಲ್ಲಿಕಾರ್ಜುನ ಸಗರದ ಮತ್ತು ತಾಯಿ ಶೈಲಾ ಸಗರದ ಸಾಧನೆಗೆ ಅಭಿನಂದಿಸಿದ್ದಾರೆ.