ಅಂತರಾಳದ ನೋವಿಗೆ ಸಾಥ್ ನೀಡುವ ಸಂಗಾತಿ ಕವಿತೆ-ಕವಿ ನಾಗೇಶ್ ನಾಯಕ
ಬೈಲಹೊಂಗಲ 25: ಕವಿತೆ ಎಂದರೆ ಅಂತರಾಳದ ನೋವಿಗೆ ಸಾಥ್ ನೀಡುವ ಸಂಗಾತಿ. ಆಕ್ರೋಶಕ್ಕೆ ಪುಟಿದೇಳುವ ಕೆಂಡದುಂಡೆ ಎಂದು ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ, ಕವಿ, ನಾಗೇಶ್ ಜೆ. ನಾಯಕ ಹುಬ್ಬಳ್ಳಿಯ ನಾಗಸುಧೆ ಜಗುಲಿಯಲ್ಲಿ ಹಮ್ಮಿಕೊಂಡ ಹೊಂಗಿರಣ ಕಾರ್ಯಕ್ರಮದಲ್ಲಿ 'ನಾನು ನನ್ನ ಕವಿತೆ' ಕುರಿತು ಮಾತನಾಡಿದರು.
ನನ್ನ ಬದುಕಿನ ದಟ್ಟ ಅನುಭವಗಳೇ ಕವಿತೆ ಬರೆಯಲು ಕಾರಣ. ಕವಿತೆ ತಪಸ್ಸು, ಧ್ಯಾನ ಇದ್ದ ಹಾಗೆ. ನಿರಂತರ ಓದು, ಶೃದ್ಧೆ, ಅನುಭವಗಳ ಮೂಲಕ ಪ್ರತಿಮೆ ರೂಪಕಗಳಲ್ಲಿ ಅದನ್ನು ಹಿಡಿದಿಡಲು ಸಾಧ್ಯ. ಇಂದು ಯುವಕರಿಗೆ ಕಾವ್ಯಪ್ರಕಟಣೆಗೆ ಅನೇಕ ಮಾರ್ಗಗಳಿದ್ದು ಅದನ್ನು ಅವರು ಉಪಯೋಗಿಸಿಕೊಳ್ಳಬೇಕು. ಕಾವ್ಯಪರಂಪರೆಯನ್ನು ಅಧ್ಯಯನ ಮಾಡುವುದಷ್ಟೇ ಅಲ್ಲದೆ ತಮ್ಮ ಸಮಕಾಲೀನರ ಕವಿತೆಗಳನ್ನೂ ಓದಬೇಕು. ಹಾಗಾದಾಗಲೇ ಸತ್ವಯುತ ಕವಿತೆಗಳು ಅರಳಲು ಸಾಧ್ಯ ಎಂದು ಅವರು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಜಾವಾಣಿ ದಿನಪತ್ರಿಕೆಯ ನಿವೃತ್ತ ಪತ್ರಕರ್ತರಾದರಾದ ಅರುಣಕುಮಾರ ಹಬ್ಬು ಮಾತನಾಡಿ ಹಿಂದಿನ ಕಾಲದ ಕವಿಗಳೆಲ್ಲ ಭೌತಿಕವಾಗಿ ಬಡವರಾಗಿದ್ದರೂ ಮಾನಸಿಕವಾಗಿ ಶ್ರೀಮಂತರಾಗಿದ್ದರು.
ಇಂತಹ ಕಾರ್ಯಕ್ರಮಗಳು ಯುವಪ್ರತಿಭೆಗಳಿಗೆ ವೇದಿಕೆ ಒದಗಿಸಿ ಒಳ್ಳೆಯ ಕೆಲಸ ಮಾಡುತ್ತಿವೆ ಎಂದರು. ಇಪ್ಪತ್ತು ಹಿರಿ-ಕಿರಿಯ ಕವಿಗಳಿಂದ ಕವಿತಾ ವಾಚನ ನಡೆಯಿತು. ಖ್ಯಾತ ಲೇಖಕಿ ಸುನಂದಾ ಕಡಮೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿ ಪ್ರಕಾಶ್ ಕಡಮೆ ಸ್ವಾಗತಿಸಿ, ಪರಿಚಯಿಸಿದರು. ರವಿಶಂಕರ ಗಡಿಯಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾಜರ್ುನ ಮೇಟಿ ಕಾರ್ಯಕ್ರಮ ಸಂಯೋಜಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 