ಮನೆಯ ಮೇಲ್ಚಾವಣಿ ಕುಸಿತ: ಬಡ ಕುಟುಂಬಕ್ಕೆ ಧನ ಸಹಾಯ

ಮನೆಯ ಮೇಲ್ಚಾವಣಿ ಕುಸಿತ: ಬಡ ಕುಟುಂಬಕ್ಕೆ ಧನ ಸಹಾಯ Roof collapse: Financial assistance to poor family

ಜಮಖಂಡಿ 12: ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಮನೆಯ ಮೇಲ್ಚಾವಣಿ ಕುಸಿದ್ದು ಬಿದ್ದ ಪರಿಣಾಮವಾಗಿ ಬಡಕುಟುಂಬ ಮೇಲ್ಚಾವಣಿ ದುರಸ್ಥಿ ಮಾಡಿಕೊಳ್ಳಲಾಗಿದೆ. 

ಸಂಕಷ್ಟದಲ್ಲಿ ಇದ್ದ ಕುಟುಂಬಕ್ಕೆ ಕರ್ನಾಟಕ ಪ್ರೇಸ್ ಕ್ಲಬ್ ಸಂಘಟನೆ ವತಿಯಿಂದ 5 ಸಾವಿರ ನಗದು ಹಣವನ್ನು ಸಹಾಯ ಮಾಡಲಾಯಿತು. ಕರ್ನಾಟಕ ಪ್ರೇಸ್ ಕ್ಲಬ್ ಅಧ್ಯಕ್ಷ ಶಶಿಕಾಂತ ತೇರದಾಳ ಮಾತನಾಡಿ. ಅತೀ ಕಡುಬಡತನದ ಕುಟುಂಬಗಳಿಗೆ ನಮ್ಮ ಸಂಘಟನೆಯಿಂದ ಕೈಲಾದಷ್ಟು ಸಹಾಯವನ್ನು ಮಾಡುವ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತದೆ. ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಕುಸಿದ್ದು ಬಿದ್ದಿರುತ್ತದೆ. ಮೇಲ್ಛಾವಣಿ ದುರಸ್ತಿ ಮಾಡಿಕೊಳ್ಳಲು ನಮ್ಮ ಸಂಘಟನೆಯು ಸಹಾಯ ಮಾಡಲು ಮುಂದಾಗಿರುತ್ತದೆ. ಪ್ರತಿಯೊಂದು ಕಾರ್ಯದಲ್ಲಿ ಬಡವರಗೋಷ್ಕರ ಸೇವೆಯನ್ನು ಮಾಡುವ ಗುರಿಯನ್ನು ಹೊಂದಿದೆ ಎಂದರು. 

ಇದೇ ಸಂದರ್ಭದಲ್ಲಿ ರವಿಕುಮಾರ ಶಿಂಗೆ. ದೀಲೀಪ ದಾಶ್ಯಾಳ. ಪ್ರವೀಣ ಹೊಳೆಪ್ಪಗೋಳ. ನಿಂಗರಾಜ ಬೆಳನ್ನವರ. ಕಿರಣ ಪವಾರ. ಗಜಾನಂದ ಕಾಂಬಳೆ. ಗುಲಾಬ ತೇರದಾಳ ಇತರರು ಇದ್ದರು.