ಗ್ರಾಮಸ್ಥರಿಗೆ ಉಪಯುಕ್ತವಾಗದ ರಸ್ತೆ ಕಾಮಗಾರಿ
Road works that are not useful for villagers
ಯಮಕನಮರಡಿ 07: ಸಮೀಪದ ಹತ್ತರಗಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಇಂದಿರಾ ನಗರದಲ್ಲಿ ಲೋಕೋಪಯೋಗಿ ಇಲಾಖೆಯ ನಾಲ್ಕುವರಿ ಕೋಟೆ ಅನುದಾನದಲ್ಲಿರಸ್ತೆ ಕಾಮಗಾರಿ ಮಾಡುತ್ತಿದ್ದು ಈ ರಸ್ತೆಯಿಂದ ಗ್ರಾಮಸ್ಥರಿಗೆ ಅನುಕೂಲವಾಗಬಹುದೇ ಎಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ ಮಳೆ ನೀರು ಚರಂಡಿಗೆ ಸೇರದೆ ಇರುವದು ಚರಂಡಿ ನಿರ್ಮಾಣ ಮಾಡಿದ್ದು ಚಿತ್ರದಲ್ಲಿ ಕಾಣಬಹುದು ಮಳೆಯಿಂದ ಸುರಿಯುವ ಮನೆಗಳ ನೀರು ಮನೆ ಅಂಗಳದಲ್ಲಿ ಬಿದ್ದು ಮನೆಯಲ್ಲಿಯೇ ಹರಿಯುವ ಪರಸ್ಥಿತಿ ಇಲ್ಲಿ ಎದ್ದು ಕಾಣುತ್ತಿದೆ ಅಲ್ಲದೆ ಸುಮಾರು ಮನೆಗಳಲ್ಲಿ ಬಹಳಷ್ಟು ಜನ ಅಂಗವಿಕಲರು ವಯೋವೃದ್ಧರು ಇರುತ್ತಾರೆ ಅವರು ಚರಂಡಿ ಮೇಲಿದ್ದ ಅಂಗಳಕ್ಕೆ ಹೇಗೆ ಬರುವುದು ಎಂಬುದನ್ನುವಿಚಾರಿಸಬಹುದಾಗಿದೆಲೋಕೋಪಯೋಗಿ ಸಚಿವರಾದ ಸತೀಶ್ ಅಣ್ಣ ಜಾರಕಿಹೊಳಿ ಅವರು ಈ ರಸ್ತೆ ಕಾಮಗಾರಿಗೆ 4:30 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದು ಇರುತ್ತದೆ.
ಆದರೆ ಈ ರಸ್ತೆ ಕಾಮಗಾರಿಯು ಬಹುತೇಕ ಸಾರ್ವಜನಿಕರಿಗೆ ಗ್ರಾಮಸ್ಥರಿಗೆ ಅನುಕೂಲಕರವಾದದ್ದು ಅಲ್ಲವೆಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ ರಸ್ತೆ ಚರಂಡಿ ಮೇಲೆ ಮನೆಗಳು ಮಾತ್ರ ಕೆಳಗೆ ಹೀಗಿರುವಾಗ ಮಳೆ ನೀರು ಎಲ್ಲಿಗೆ ಹೋಗಬೇಕು ಎಂಬುದನ್ನು ಗುತ್ತಿಗೆದಾರರು ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಈ ಕುರಿತು ಸಂಬಂಧ ಪಟ್ಟ ಗ್ರಾಮ ಪಂಚಾಯಿತಿಗೆ ತಿಳಿಸಿದರು ಸಹಿತ ಯಾವುದೇ ತರದ ಪರಿಣಾಮವಾಗಿಲ್ಲ ಅಲ್ಲದೆ ಸದರಿ ಇಂದಿರಾನಗರದಲ್ಲಿ ಸಮರ್ಕ ರಸ್ತೆ ದೀಪದ ವ್ಯವಸ್ಥೆಯು ಸಹಿತ ಇರುವುದಿಲ್ಲ ರಾತ್ರಿ ವೇಳೆಯಲ್ಲಿ ಯಾರಾದರೂ ಚರಂಡಿಯಲ್ಲಿ ಆಯ್ತಪ್ಪಿ ಬಿದ್ದರೆ ಅವರು ಇಡೀ ರಾತ್ರಿ ಚರಂಡಿಯಲ್ಲಿ ಉಳಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಕಾರಣ ಗ್ರಾಮಸ್ಥರು ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದರು ಸಹಿತ ಇದಕ್ಕೆ ಯಾರು ಗಮನಿಸುತ್ತಿರುವದಿಲ್ಲ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 