ಸೇವಾ ನಿವೃತ್ತಿ: ರವಿಂದ್ರ ಉಮರಾಣಿಗೆ ಸನ್ಮಾನ

ಸೇವಾ ನಿವೃತ್ತಿ: ರವಿಂದ್ರ ಉಮರಾಣಿಗೆ ಸನ್ಮಾನ Retirement: Ravindra Umarani Felicitated

ಹುಬ್ಬಳ್ಳಿ 21: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು  ಕೆಎಲ್‌ಇ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ, ಸೇವಾ ನಿವೃತ್ತರಾದ ರವಿಂದ್ರ ಉಮರಾಣಿ ಅವರಿಗೆ ಶಾಲು, ಮಾಲಾರೆ​‍್ಣ ಮಾಡಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು.  

ಅಭಿನಂದಿಸಿ, ನಿವೃತ್ತ್‌ ಜೀವನ ಸುಖಕರವಾಗಲೆಂದು ಶುಭ ಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಡಾ. ಮಹೇಶ ಡಿ. ಹೊರಕೇರಿ, ಡಾ.ಎಸ್‌.ಎಲ್‌.ಸಂಗಮ, ಸಿದ್ದಯ್ಯ ಹಿರೇಮಠ, ನಿರ್ಮಲಾ ಚಿಗಟೇರಿ, ಡಾ. ಪ್ರೀತಿ ಪಾಟೀಲ, ಎಸ್‌.ಸಿ.ಪಾಟೀಲ, ಇಂದುಧರ ಹಿರೇಮಠ,  ಡಾ. ಸತ್ಯ ಸವಣೂರ, ಅನಿಲ ಧಾರವಾಡಕರ, ಚಂದ್ರಶೇಖರ ಚನ್ನಂಗಿ, ಡಾ. ಬಿ.ಎಸ್‌.ಮಾಳವಾಡ, ಜಯದೇವ ಹಿರೇಮಠ, ಬಿರಾದಾರ, ಮುತ್ತು, ಮುಂತಾದವರು ಇದ್ದರು.