ಸ್ಪಂದನೆ -ಚರಂಡಿ ಸ್ವಚ್ಛತೆ

ಸ್ಪಂದನೆ -ಚರಂಡಿ ಸ್ವಚ್ಛತೆ   Response - Drain cleaning


 ಲಕ್ಷ್ಮೇಶ್ವರ 09 :  ಪಟ್ಟಣದ ಅಂಬೇಡ್ಕರ್ ಕಾಲೋನಿ ಒಂದರಲ್ಲಿ ಸೂಕ್ತ ಚರಂಡಿ ಇಲ್ಲದೆ ಮನೆಗೆ ಬಳಕೆ ಮಾಡಿದ ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿತ್ತು ಇದರಿಂದ ನಿವಾಸಿಗಳು ಗಲೀಜುನಲ್ಲಿ ನಡೆದಾಡಕೊಂಡು ಹೋಗುತ್ತಿದ್ದರು ಇದನ್ನು ನಮ್ಮ ಲೋಕದರ್ಶನ ಪತ್ರಿಕೆಯಲ್ಲಿ ಇದು ರಸ್ತೆನಾ ಚರಂಡಿನಾ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಸಾರ ಮಾಡಲಾಗಿತ್ತು ವರದಿಗೆ ಸ್ಪಂದಿಸಿದ ಪುರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಚರಂಡಿ ಸ್ವಚ್ಛಗೊಳಿಸುವ ವಾಹನ ಮುಖಾಂತರ ತಾತ್ಕಾಲಿಕವಾಗಿ ಚರಂಡಿಯನ್ನು ಸ್ವಚ್ಛಗೊಳಿಸಿದ್ದಾರೆಮುಂದಿನ ದಿನಗಳಲ್ಲಿ ಸೂಕ್ತ ಚರಂಡಿ ನಿರ್ಮಿಸಿ ಸ್ವಚ್ಛತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದೆಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ ವರದಿ ಪ್ರಸಾರ ಮಾಡಿದ ಲೋಕದರ್ಶನ ಪತ್ರಿಕೆಗೆ ನಿವಾಸಿಗಳು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ