ಧಾರವಾಡ - ಬೆಳಗಾವಿ ರೈಲು ಮಾರ್ಗ ರೇಲ್ವೆ ಟ್ರಾಕ್ ಪುನರ್ ಪರೀಶೀಲಿಸಲು ಮನವಿ
Request for reconsideration of Dharwad - Belgaum railway track
ಲೋಕದರ್ಶನ ವರದಿ
ಧಾರವಾಡ 13 : ಧಾರವಾಡ ದಿಂದ ಬೆಳಗಾವಿ ನಗರಕ್ಕೆ ಕಿತ್ತೂರು ಮುಖಾಂತರ ಹೋಗುವ ರೇಲ್ವೆ ಮಾರ್ಗ ಆಗಬೇಕೆಂಬ ಈ ಭಾಗದ ಜನರ ಬಹುದಿನಗಳ ಕನಸು ಇಡೇರಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು ಆದರೆ ಈ ಪ್ರಾರಂಭದ ಯೋಜನೆಯು ಚಿಕ್ಕಮಲ್ಲಿಗವಾಡ ಕರ್ನಾಟಕ ಗೃಹ ಮಂಡಳಿ ಮತ್ತು ಆಯ್.ಆಯ್.ಟಿ ಯಂತಹ ಪ್ರತಿಷ್ಠಿತ ಸಂಸ್ಥೆಗಳಿದ್ದು ಮುಮ್ಮಿಗಟ್ಟಿಯ ಹಾಗೂ ಬೇಲೂರು ಹೆಗ್ಗೇರಿ ಕೋಟೂರು ಶಿಗನಹಳ್ಳಿ ಈ ಎಲ್ಲ ಗ್ರಾಮಗಳಲ್ಲಿ ಕೈಗಾರಿಕೆ ಪ್ರದೇಶವಾಗಿದ್ದು ರೇಲ್ವೆ ಟ್ರಾಕ್ ಮಾರ್ಗ ಅವೈಜ್ಞಾನಿಕವಾಗಿದ್ದರಿಂದ ಈ ಭಾಗದ ಜನರು ರೈತರು ಕೈಗಾರಿಕೆ ಉದ್ಯಾಮಿಗಳ ವಿರೋಧವಿದ್ದು ಯೋಜನೆಯ ರೇಲ್ವೆ ಟ್ರಾಕ್ ಪುನರ್ ಪರೀಶೀಲಿಸಿ ಕೈಗಾರಿಕ ಪ್ರದೇಶವಾಗಿದ್ದರಿಂದ ಹೊರ ಭಾಗದಿಂದ ಯೋಜನೆ ರೂಪಿಸಲು ನುರಿತ ತಜ್ಞರನ್ನು ನೇಮಿಸಬೇಕು
ಈ ಭಾಗದ ತಾಂತ್ರಿಕ ಹಾಗೂ ತಾಂತ್ರಿಕೇತರ ಯುವಕರು ಉದ್ಯೋಗ ಅರಿಸಿ ಬೆಂಗಳೂರು ಮತ್ತು ಇನ್ನಿತರೆ ನಗರಕ್ಕೆ ಹೋಗುತ್ತಿದ್ದರು. ಇತ್ತಿಚಿನ ವರ್ಷಕ್ಕೆ ಕೈಗಾರಿಕೆಗಳು ಬಂದು ಯುವ ಜನರಿಗೆ ಉದ್ಯೋಗ ಸಿಗುವಂತಾಗಿದೆ. ಕಾರಣ ತಾವುಗಳು ರೈತರು ಕೈಗಾರಿಕಾ ಉದ್ಯಮಿಗಳು ಹಿತ ಕಾಪಾಡಬೇಕೆಂಬುದು ವೈಜ್ಞಾನಿಕವಾಗಿ ಮಾರ್ಗವನ್ನು ತೋರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ವೀರಯ್ಯಾ ಗುರುವಯ್ಯಾ ಚಿಕ್ಕಮಠ, ಶ್ರೀಶೈಲಗೌಡ ಕಮತರ, ಶಿವು ಬೆರಳದ, ಮಂಜು ಗೋಕಾವಿ, ಪರಮೇಶ ಚ ಅಂಗಡಿ, ಚಂದ್ರು ತಲ್ಲೂರ, ಬಸವರಾಜ ಮರಿತೆಮ್ಮನವರ, ಮಂಜು ಚಂದನಮಟ್ಟಿ, ಮಂಜು ಚಂದನಮಟ್ಟಿ, ಬಾಳಪ್ಪ ಕಡತಾಳ, ಕರಿಯಪ್ಪ ಗಂಡಗುದರಿ, ಮಲ್ಲಪ್ಪ ಶಿರಮಣ್ಣವರ, ವಿಠ್ಠಲ ಬಿರಗಾರ ಸಮಸ್ತ ರೈತ ಬಾಂಧವರು ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 