ಧಾರ್ಮಿಕ ಪಥ ಸಂಚಲನ ಸಂಪನ್ನ
Religious procession
ಯರಗಟ್ಟಿ, 19 : ಶ್ರಾವಣ ಮಾಸದ ಅಂಗವಾಗಿ ಶ್ರೀ ಮುರುಘೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಧಾರ್ಮಿಕ ಪಥ ಸಂಚಲನ ಕಾರ್ಯಕ್ರಮ ಸಮೀಪದ ಮುನವಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರದ್ಧಾಭಕ್ತಿ ಭಾವದಿಂದ ಜರುಗಿತು. ಭಕ್ತಾದಿಗಳು ಶ್ರೀಗಳು ಬರುವ ಮಾರ್ಗಗಳಲ್ಲಿ ರಂಗವಲ್ಲಿ ಹಾಕಿ, ಶ್ರೀಗಳ ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸುತ್ತಿದ್ದರು.
ಶ್ರೀಗಳ ಸಾನಿಧ್ಯದಲ್ಲಿ ಶ್ರಾವಣ ಶಿವಾನುಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಂಗಾಧರ ಗೊರಾಬಾಳ, ಈರಣ್ಣ ಸಂಕಣ್ಣವರ, ಮನೋಹರ ನಾಯ್ಕ, ಮಹಾದೇವ ಗೋಪಶೆಟ್ಟಿ, ಬಿ.ಬಿ.ಹುಲಿಗೊಪ್ಪ, ಸಂಗಮೇಶ ಹೊಳಿಮಠ, ಶಂಕರ ಗಯ್ಯಾಳಿ, ರಮೇಶ ಮುರಂಕರ, ವೈ.ಟಿ.ತಂಗೋಜಿ, ರವಿ ಮೂಲಿಮನಿ, ಗಂಗಮ್ಮ ಸಂಕಣ್ಣವರ, ಎಂ.ಜಿ.ಹೊಸಮಠ, ಅನ್ನಪೂರ್ಣ ಲಂಬೂನವರ, ಉಷಾ ಗೋಪಶೆಟ್ಟಿ, ಗೀತಾ ಜಾವೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 