ಹೈದ್ರಾಬಾದ್ ವಿಮೋಚನಾ ಹೋರಾಟದ ಸಮರ್ಥ ನಾಯಕತ್ವ ವಹಿಸಿದ್ದು ರಾಮಾನಂದ ತೀರ್ಥರು - ಪತ್ರಕರ್ತ ಶ್ರೀನಿವಾಸ ಸಿರನೂರಕರ್
Ramananda Tirtha provided effective leadership for the Hyderabad liberation struggle - Journalist Sr
ವಿಜಯಪುರ 10: "ಭಾರತ ಬ್ರಿಟಿಷರಿಂದ ಸ್ವತಂತ್ರಗೊಂಡರೂ ಹೈದ್ರಾಬಾದ್ "ನಿಜಾಮ ಮೀರ ಉಸ್ಮಾನ ಅಲಿ ಖಾನ" ಮಾತ್ರ ಭಾರತಕ್ಕೆ ವೀಲೀನವಾಗಲು ಹಿಂದೇಟು ಹಾಕಿದ್ದಲ್ಲದೇ , ಅವನು “ಕಾಸಿಂ ರಜವಿ' ಎಂಬ ವ್ಯಕ್ತಿಯ ಕೈಗೊಂಬೆಯಾಗಿ ರಜಾಕರ ಸೇನೆಪಡೆಯನ್ನು ರಚೆನೆ ಮಾಡಿ ಭಾರತ ಪರಘೋಷಣೆ ಕೂಗುವವರನ್ನು ಹತ್ಯ ಮಾಡಿಸಲಾರಂಭಿಸಿದ. ಆಗ ರಜಾಕರ ಪಡೆಯು ಮಕ್ಕಳು ಹಿ ಮರಿ ವೃದ್ಧರೆಂದು ನೋಡದೆ ಸಾವಿರಾರು ಜನರನ್ನು ಹತ್ಯ , ಸಾವಿರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಾರೆ. ಇಂತಹ ಪ್ರಕ್ಷುದ್ದ ಸಂದರ್ಭದಲ್ಲಿ ಸಮರ್ಥ ನಾಯಕತ್ವ ವಹಿಸಿಕೊಂಡು ಮುಂಚೂಣಿಗರಾಗಿ ನಿಜಾಮ ವಿರುದ್ಧ ಹೋರಾಟ ಮಾಡಿದವರು ರಾಮಾನಂದ ತೀರ್ಥರು" ಎಂದು ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್ ಅವರು ತಿಳಿಸಿದರು.
ರವಿವಾರ ನವೆಂಬರ್ 9 ರಂದು ನಗರದ ಪಿಡಿಜೆ ಹೈಸ್ಕೂಲ್ ಸಭಾ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾ ಸಮಿತಿ ಆಯೋಜನೆ "ಹೈದರಾಬಾದ್ ವಿಮೋಚನಾ ರೂವಾರಿ ರಾಮಾನಂದತೀರ್ಥ ಬದುಕು ಮತ್ತು ಹೋರಾಟ' ಕಾರ್ಯಕ್ರಮದಲ್ಲಿ ಮಾತಾಡಿದ ಅವರು ' ಅಕ್ಟೋಬರ್ 3 , 1903 ರಂದು ಸಿಂದಗಿಯಲ್ಲಿ ಜನಿಸಿದ ರಾಮಾನಂದತೀರ್ಥರ ಮೂಲ ಹೆಸರು, ವೆಂಕಟೇಶ ಭಗವಾನರಾವ್ಖೇಡಗಿಕರ್. ಬಾಲ್ಯದಿಂದಲೂ ಸನ್ಯಾಸಿಯಾಗು ಇಚ್ಛೆ ಅವರಿಗಿದ್ದು ಲೋಕಮಾನ್ಯತಿಲಕರ ಮತ್ತು ಮಹಾತ್ಮಾಗಾಂಧಿಯ ಪ್ರಭಾವದಿಂದ ಸ್ವಾತಂತ್ರ್ಯ ಹೋರಾಟಕ್ಕೆಧುಮುಕಿದರೇ , ಸ್ವಾಮಿರಾಮಾನಂದ ಪ್ರಭಾವಅವರನ್ನು ಸನ್ಯಾಸತ್ವಕಡೆ ಸೆಳೆಯಿತು. ಆಯಸ್ಕಾಂತೀಯ ವ್ಯಕ್ತಿತ್ವದರಾಮಾನಂದತೀರ್ಥರು ಹೈದ್ರಾಬಾದ್ ನಿಜಾಮ ವಿರುದ್ಧ ಹೋರಾಟದ ನೇತೃತ್ವವಹಿಕೊಂಡ ಪರಿಣಾಮ ಅಂದಿನ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯ್ ಪಟೇಲರು ನಿಜಾಮನ ಸೈನಿಕ ಕಾರ್ಯಾಚರಣೆ ಮಾಡಿ ಹೈದ್ರಾಬಾದ್ ಪ್ರಾಂತ್ಯವನ್ನು ಭಾರತಕ್ಕೆ ವೀಲೀನಗೊಳಿಸುವಲ್ಲಿ ಸಫಲರಾಗುತ್ತಾರೆ. ಕೃಷಿ , ಭಾಷಾವಾರು ಪ್ರಾಂತ ವಿಷಯದಲ್ಲೂ ಪಿ ವಿ ನರಸಿಂಹರಾವ್ ಅವರ ಗುರುಗಳು , ಕಲಬುರಗಿಜಿಲ್ಲೆಯ ಮೊದಲ ಸಂಸದರಾದರಾಮಾನಂದತೀರ್ಥರಕೊಡುಗೆಅನನ್ಯವಾದದ್ದುಎಂದುಅವರು ವಿವರಿಸಿದರು.
ವಿಧಾನ ಪರಿಷತ್ತಿನ ಮಾಹಿ ಸದಸ್ಯರಾದಅರುಣ ಶಹಾಪುರ ಮಾತಾಡಿ 'ರಜಾಕಾರರಕರಿ ನೆರಳು ನಮ್ಮ ವಿಜಯಪುರ ಜಿಲ್ಲೆಯ ಮೇಲೂ ಆಗಿದೆ ,ರಾಮಾನಂದ ತೀರ್ಥರ ಕುರಿತು ಕಾರ್ಯಕ್ರಮ ಅವರ ಹುಟ್ಟೂರು ಸಿಂದಗಿಯಲ್ಲಾಗಬೇಕು , ಅದಕ್ಕೆ ಬೇಕಾದ ಸಹಕಾರ ನೀಡುವೆ' ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ನಾರಾಯಣ ಬಾಬಾನಗರ ವಹಿಸಿದ್ದರು. ನಿರೂಪಣೆ - ಶ್ರೀರಂಗ ಕುಲಕರ್ಣಿ , ಪ್ರಾರ್ಥನೆ - ಬಲವಂತಕುಲಕರ್ಣಿ , ಪರಿಚಯ - ಗಂಗಾಧರ ಪತ್ತಾರ , ವಂದನಾರೆ್ಣ - ಶ್ರೀಪಾದ(ದೀಪಕ) ಪಟವರ್ಧನ್ , ಶಾಂತಿಮಂತ್ರ- ಅನಿಲ ಬಳ್ಳುಂಡಗಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸುಧೀಂದ್ರಟಂಕಸಾಲಿ , ವಿವೇಕ ಕುಲಕರ್ಣಿ , ಶ್ರೀರಂಗ ಪುರಾಣಿಕ , ಸುಕಾಂತ ಕುಲಕರ್ಣಿ, ರಾಮಸಿಂಗ್ ಹಜೇರಿ , ಬಾಬುರಾವಕುಲಕರ್ಣಿ, ಚಿದಂಬರ ಪಾಟೀಲ , ರಾಘವೇಂದ್ರಆಲೂರು , ಸುಭಾಷ್ಕನ್ನೂರು ,ಮಯೂರತಿಳಗೂಳಕರ್ , ಪ್ರಶಾಂತಕುಲಕರ್ಣಿ , ರವೀಂದ್ರ ಹಲ್ಯಾಳ , ಕೇಶವ ಕುಲಕರ್ಣಿ , ಬಿ ಎಸ್ಕುಲಕರ್ಣಿ , ಆರ್ ಬಿ ಕುಲಕರ್ಣಿ , ಸಂಜೀವ ಸಿರನೂರಕರ್ ,ಬಸವರಾಜಆಲೂರು ,ಜಗದೀಶ್ಗುಲಗಂಜಿ , ಕಲ್ಯಾಣರಾವದೇಶಪಾಂಡೆ , ಮಂಜುನಾಥ ಹಳ್ಳಿಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 