ಸರ್ಕಾರದ ಸಹಾಯಧನದೊಂದಿಗೆ ಗುಣಮಟ್ಟದ ಮನೆ ನಿರ್ಮಿಸಿಕೊಳ್ಳಬೇಕು: ಶಾಸಕ ಐಹೊಳೆ
Quality houses should be built with government subsidies: MLA Aihole
ರಾಯಬಾಗ, 07 : ಸರ್ಕಾರ ನೀಡುವ ಸಹಾಯಧನದೊಂದಿಗೆ ತಮ್ಮ ಹಣವನ್ನು ಹಾಕಿ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಳ್ಳಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಬುಧವಾರ ಪಟ್ಟಣದ ಶಾಸಕರ ಗೃಹಕಚೇರಿಯಲ್ಲಿ ನಿಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಾಳ ಗ್ರಾಮದ ವಸತಿ ರಹಿತರಿಗೆ ಬಸವ ವಸತಿ ಯೋಜನೆಯಡಿ (ಹೆಚ್ಚುವರಿ) ಮಂಜೂರಾದ 40 ಫಲಾನುಭವಿಗಳಿಗೆ ಮನೆ ಕಟ್ಟಡ ನಿರ್ಮಾಣ ಆದೇಶ ಪ್ರತಿಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಮನೆಗಳ ನಿರ್ಮಾಣದ ಜೊತೆಗೆ ಶೌಚಾಲಯಗಳನ್ನು ಕೂಡ ನಿರ್ಮಿಸಿಕೊಳ್ಳಬೇಕು. ಬಯಲು ಶೌಚ ಮುಕ್ತ ಗ್ರಾಮ ಮಾಡಲು ಎಲ್ಲರೂ ಕೈಜೋಡಿಸಬೇಕೆಂದರು.
ಗ್ರಾ.ಪಂ.ಸದಸ್ಯರಾದ ಅರುಣ ಐಹೊಳೆ, ಅಪ್ಪಾಸಾಬ ಕೆಂಗನ್ನವರ, ಸಿಬ್ಬಂದಿ ಮಲ್ಲು ಕಾಂಬಳೆ, ಭೀಮು ಮುಧೋಳೆ, ಸತ್ಯಪ್ಪ ದಾವಣೆ, ನಿಲಪ್ಪ ಐಹೊಳೆ, ತಮ್ಮಾಣಿ ಗೊಂಡೆ, ಕುಮಾರ ಗುರವ, ಬಸಲಿಂಗ ಮಗದುಮ್ಮ, ಈರಗೌಡ ಪಾಟೀಲ, ಮಹೇಶ ಕರಮಡಿ, ಬಾಳು ಹಳಾಜೆ ಹಾಗೂ ಫಲಾನುಭವಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 