ಬೆಳಗಾವಿ 13: ತಾಲೂಕಿನ ಮಾರಣಹೊಳ ಗ್ರಾಮದಲ್ಲಿ ಅಕ್ರಮ-ಸಕ್ರಮ ಯೋಜನೆ ಅಡಿ 144 ಎಕರೆ ಸರ್ಕಾರಿ ಭೂಮಿ ಮಂಜೂರಾತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಎದುರುಪ್ರತಿಭಟನೆ ಮಾಡಲಾಯಿತು.
ಭೂಮಿ ಹಂಚಿಕೆ ಕಾನೂನಾತ್ಮಕವಾಗಿ ಆಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಿ ಪರೀಶೀಲನೆ ಮಾಡಿ ಭೂಮಿಯನ್ನು ಮರಳಿ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಕೆಆರ್ಎಸ್ ಪಕ್ಷ ಪ್ರತಿಭಟನೆ ಮೂಲಕ ಒತ್ತಾಯಿಸಿತು.
ಪಕ್ಷದ ಜಿಲ್ಲಾಧ್ಯಕ್ಷ ಇರ್ಫಾನ್ ಬಾಗೇವಾಡಿ, ಕಲ್ಲಪ್ಪ ಮೇತ್ರಿ, ಬಸವರಾಜ್ ಕೋಲಕಾರ, ಶುಭಂ ರಾಘವೇಂದ್ರ, ಹನುಮಂತ ಮಡಿವಾಳ ಯಲ್ಲಪ್ಪ ಪೂಜಾರಿ, ಸಾಗರ ಕುಂಬಾರ ಮೊದಲಾದವರು ಇದ್ದರು.